Monday 6 September 2021

ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ ankita abhinava janardhana vittala

 ರಾಗ: ಯದುಕುಲ ಕಾಂಬೋಜಿ ತಾಳ: ಆದಿ

ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ ಪ.


ಯೋಗಿಕುಲವರ್ಯ ಭಾಗವತರಪ್ರಿಯ ಸತ್ಕವಿಕುಲಗೇಯ ಅ.ಪ


ಯತಿಸುಧೀಂದ್ರಕರಸುತಾದ್ಭುತಚರಿಯ ಪುಸಿಯಲ್ಲವು ಖರಿಯ

ಶ್ರಿತಜನನುತ ಕಾಮಿತತರು ಸುರಧೇನು ಚಿಂತಾಮಣಿ ತಾನು

ಶತಪರ್ವತವತ್ಸರ ವೃಂದಾವನದಿ ನಲಿವನು ಮುದದಿ

ಚತುರವಿಧಸುಪುರುಷಾರ್ಥಗಳನೆ ಕೊಡುವ ನಂಬಿದವರಘ ತಡೆವ 1

ವರಮಂತ್ರಾಲಯ ಸುರುಚಿರ ಗೃಹದಲ್ಲಿ ವರಹಜತೀರದಲಿ

ಮೆರೆವ ಮಂದರನು ಕರೆದು ಪಾಪ ಕಳೆವ ಮನದಲಿ ತಾ ಪೊಳೆವ

ಸರ್ವಜ್ಞರು ಮೊದಲಾದ ಮುನಿಗಳಲ್ಲಿ ಇಪ್ಪರು ಮುದದಲ್ಲಿ

ದುರಭಿಮಾನದಲಿ ಬಾರದವನೆ ಕೆಟ್ಟ ಬರಲವ ಸುಶ್ರೇಷ್ಠ 2

ಮಧ್ವಮುನಿಯಸುಮತಾಬ್ಧಿಪೂರ್ಣಚಂದ್ರ ಸದ್ಗುಣಸಾಂದ್ರ

ಸದ್ವೈಷ್ಣವಗುರು ಕುಮತಾದ್ರಿಗೆಕುಲಿಶ ಕಾಷಾಯವಾಸ

ಸಿದ್ಧಾಂತಸುಧೆಗೆ ಪರಿಮಳಾಖ್ಯ ಗ್ರಂಥ ಮಾಡಿದ ದಯವಂತ

ಮುದ್ದು ಅಭಿನವಜನಾರ್ದನವಿಠಲನ್ನ ಸದ್ಭಕ್ತವರೇಣ್ಯ 3

***


No comments:

Post a Comment