Sunday 1 August 2021

ದಾಸರಾಯರ ದಿವ್ಯ ಚರಣ ಭಜಿಸಿ ankita varadesha vittala pranesha dasa stutih

 ..

kruti by ವರದೇಶ ವಿಠಲರು varadesha vittala dasaru

ಪ್ರಾಣೇಶದಾಸರಾಯರ ಸ್ತೋತ್ರ


ದಾಸರಾಯರ ದಿವ್ಯ ಚರಣ ಭಜಿಸಿ

ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ಪ


ದಾಸರಾಯರ ಪಾದ ಭಜಿಪ ಸದ್ಭಕ್ತರ

ಏಸುಜನುಮದ ಪಾಪರಾಶಿ ಪರಿಹರವು

ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು

ಲೇಶ ಸಂಶಯವಿಲ್ಲ ಆಲಸವು ಸಲ್ಲ 1


ಮರುತಮತ ತತ್ವದ ತೆರೆಗಳಿಂ ಸೂಸುತ

ಧರಣಿಸುರರಿಗೆ ರಾಮನಾಮಾಮೃತ

ನಿರುತಭಜಿಸಲು ಜ್ಞಾನವೈರಾಗ್ಯ ತರುಮಣಿಯ

ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ 2


ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ

ಅಜ್ಞಾನತಿಮಿರವನು ದೂರೋಡಿಪ

ಸೂಜ್ಞರೆಂಬುವ ತಾವರೆಗಳರಳಿಸುವಂಥ

ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ 3


ನಮಿಪಜನ ಭವತಾಪಕಳೆದು ಸದ್ಭಕ್ತಿಯಂ -

ಬಮಿತ ಅಹ್ಲಾದವನು ಬೀರುವಂಥ

ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ

ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4


ದಾಸಕುಲತಿಲಕ ಪ್ರಾಣೇಶರಾಯನ ಕವನ

ಶ್ರೀಶಕಥೆಗಳ ರಾಶಿಮೀಸಲಾಗಿರಲು

ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ

ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ5


ಈ ಗುರುಗಳ ಪಾದಕೆರಗಿದ್ದ ಶಿರಧನ್ಯ

ಈ ಗುರುಗಳೀಕ್ಷಿಸಿದ ನೇತ್ರ ಧನ್ಯ

ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ

ಈ ಗುರುಗಳನು ಮನದಿ ನೆನೆವÀನರ ಧನ್ಯ 6


ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ

ಶ್ರೀಗುರುಪ್ರಾಣೇಶ ಭಜಕರೆನಿಪ

ನಾಗಪರಿಯಂತ ವರದೇಶ ವಿಠಲನ ಪ್ರೀಯ

ಯೋಗಿ ವರದೇಂದ್ರ ಮುನಿಗಳ ಪಾದ ಭೃಂಗ 7

***


No comments:

Post a Comment