Thursday 1 July 2021

ವಿಜಯೀಂದ್ರ ಗುರುರಾಯರ ಅನುದಿನ ಪೂಜಿಸಿದೈ ಮುದದಿ ankita varadaraja vijayeendra teertha stutih

 " ವರದರಾಜಾಂಕಿತ " ಶ್ರೀ ತರಂಗಿಣೀ ರಾಮಾಚಾರ್ಯರ ವದನಾರವಿಂದದಲ್ಲಿ ಹೊರಹೊಮ್ಮಿದ - ತಮ್ಮ ವಿದ್ಯಾ ಗುರುಗಳಾದ ಶ್ರೀ ವಿಜಯೀ೦ದ್ರ ತೀರ್ಥರ ಸ್ತೋತ್ರ "

ರಾಗ : ಆನಂದಭೈರವಿ ತಾಳ : ರೂಪಕ


ವಿಜಯೀ೦ದ್ರ ಗುರುರಾಯರ ಅನುದಿನ ।

ಪೂಜಿಸಿದೈ ಮುದದಿ ।। ಪಲ್ಲವಿ ।।


ಯಾಚಕ ಭಕ್ತರ ಕಲ್ಪಭೂಜನಾಗಿ ಪುಟ್ಟಿ ।

ವ್ಯಾಸರಾಯರನುಗ್ರಹ ಪಡೆದು -

ಜಗದಿ ಮೆರೆವ ।। ಅ ಪ ।।


ಮುಂದೆ ಬೊಮ್ಮನಾಗಿ । ಪುಟ್ಟುವಾ ।

ನಂದತೀರ್ಥರ ಗ್ರಂಥಗಳಂದ ।

ಚಂದರೀಕಾಚಾರ್ಯರಿಂದ ತಳಿದು -

ನಲಿದು ಲೋಕದೊಳು ಮೆರೆದು ।

ಸುಂದರಾಂಗ ಶ್ರೀ ಮೂಲರಾಮ -

ಚಂದ್ರನ ಚರಣಾರವಿಂದ ।

ಅಂದದಿಂದ ಭಜಿಸುತ್ತ -

ಬಂದು ಕುಂಭಕೋಣದಿ -

ನಿಂತ ।। ಚರಣ ।।


ಪಂಕಜಧರೋತ್ತಮನೆಂಬೋ- 

ಸುಧಾಮೋದಗಳಿಂದ ।

ಹಿಂಗದೆ ಶಿಷ್ಯರಿಗರುಹುತ -

ಶ್ರುತಿ ಸ್ಮೃತಿಗಳಿಂದ ಕೂಡಿ ।

ಶಂಕಿಸುತ ಬರುವ ಮಾಯಾಮತ -

ಕಿಂಕರರ ಕರಗಳ ।

ಬಿಂಕದಿ ಮಧ್ವಸಿದ್ಧಾಂತ-

ದಂಕುಶದಿಂದ ಸದೆದ ।। ಚರಣ ।।


ಶೀಲ ಭಕ್ತ ಮನ । ಕ ।

ಮಲ ಭಾನುಧೇನುವಾಗಿ ಸೇವಕರ ।

ಪಾಲಿಸಿ ಸಂತಾನ ಕೊಡುವ ನೋಡಿ -

ಬೇಡಿ ಈಡಿಲ್ಲಧಾ೦ಗೆ ।

ಇಳಿಯುತ ಕಾಂಚೀಪುರದಾ -

ನೆಲದಿ ಶೇಷಶಯನನಾದ ।

ಚಲುವ ವರದರಾಜನ ನೋಡಿ -

ನಲಿದು ನಲಿದು -

ಕುಣಿದಾಡುವ ।। ಚರಣ ।।

***


No comments:

Post a Comment