Monday 6 September 2021

ಚಿತ್ತಪಹಾರಕನೇ ಅತ್ಯಂತ ಕರುಣಾಳು ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ ankita seetarama vittala

 ರಾಗ: ದರ್ಬಾರ್ ತಾಳ: ಆದಿ

ಚಿತ್ತಪಹಾರಕನೇ ಅತ್ಯಂತ ಕರುಣಾಳು

ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ


ನಿತ್ಯ ಮಂತ್ರಾಲಯಕೆ ಎಲ್ಲಿಂದಲೋ ಬಂದು

ಎತ್ತಿ ಕೈಮುಗಿವರಿಗೆ ಉತ್ತಮ ವರವೀವ ಅ. ಪ


ಚಿತ್ತವಹರಿಸುತ ವಿತ್ತಭಾಗ್ಯವನೀವೆ

ಇತ್ತುದವೆಲ್ಲವ ಮತ್ತೆ ನೂರ್ಮಡಿಮಾಡಿ

ಸ್ತುತ್ಯಗುರುವೆ ನಿನಗೆ ಎತ್ತಲೂ ಸರಿಗಾಣೆ

ಸತ್ಯವೋ ಸತ್ಯವೋ ಸತ್ಯ ಭಕ್ತವತ್ಸಲ ಸ್ವಾಮಿ 1

ಈಕ್ಷಿಸಿ ಕರುಣಕಟಾಕ್ಷದಿ ಭಕುತರ

ತಕ್ಷಣ ವರವಿತ್ತು ಪ್ರತ್ಯಕ್ಷವಾಗುತ

ಸೂಕ್ಷ್ಮದೃಷ್ಟಿಯ ಭಕ್ತಪಕ್ಷಪಾತಿಯೇ

ರಕ್ಷಾರಸದ ದಿವ್ಯ ಅಕ್ಷಯ ಪಾತ್ರೆಯೋ 2

ವರುಷಮುನ್ನೂರರಿಂ ನಿನ್ನ ಬೃಂದಾವನ

ವರಗಳ ಧಾರೆಯಸೂಸಿ ಸುರಿಯುತಲಿದೆ

ವರವಾತದೂತನೆ ಮಂತ್ರಾಲಯಪ್ರಭು ನಮ್ಮ

ಮರೆಯಬೇಡವೊ ಸೀತಾರಾಮವಿಠಲದೂತ 3

***


No comments:

Post a Comment