Thursday 26 December 2019

ಪೂರ್ವಾಶ್ರಮದ ನಾಮ ankita madhwesha krishna raghuvarya teertha stutih

ರಘುವರ್ಯತೀರ್ಥರ ಸ್ಮರಣೆ

ಪೂರ್ವಾಶ್ರಮದ ನಾಮ ರಾಮಚಂದ್ರಶಾಸ್ತ್ರಿಎಂದೆನುತ
ಪ್ರಚಾರ ಕಾಲದಲ್ಲಿ ಬಹಳ ಆಸಕ್ತಿಯ ಪೊಂದುತ್ತ||ಪಲ್ಲ||

ಸಂಚಾರಮಾರ್ಗದಿ ಮುಂದೆ  ಮಣಪುರ ಗ್ರಾಮಸೇರಿ
 ಮ್ಲೇಚ್ಛ ರಾಜನಿರಲು  ಮತ್ತೆ ಮುಂದೆ ಸಾಗಿ||೧||

 ಮೂಲರಾಮನ ಪೆಟ್ಟಿಗೆ ಭುಜದ ಮೇಲೆ ಇರಿಸಿ
ನದಿಯ ದಾಟುತಿರಲು ಭೀಮರತಿಯು ದಾರಿಯ ಬಿಡಲು||೨||

 ಸ್ವರ್ಣಾವಳಿ ಗ್ರಾಮದಲ್ಲಿ ಸುಬ್ಬಾಭಟ್ಟ ದಂಪತಿಗಳಿಗೆ 
 ಮಗುವು ಆಗುವ ಸೂಚನೆ ತಿಳಿಸಿ ಮಠಕ್ಕೆ ಕೊಡಬೇಕಂತ
ಹೇಳಿ||೩||

 ಪ್ರಸವದ ಸಮಯದಲ್ಲಿ ಬಂಗಾರು ತಟ್ಟೆಯ ಕಳಿಸಿ
 ಕುಶಲದಿ ಮಗುವನೆ ತರಿಸಿ ಕೂರ್ಮಾಭಿಷೇಕದ ಹಾಲು ಕುಡಿಸಿ||೪||

 ನಾಮಕರಣ ಮಾಡಿ ರಾಮಚಂದ್ರನೆಂದುಯುಕ್ತ
ವಯಸುಬರಲು ಉಪನಯನ ಕಾರ್ಯ ಮಾಡಿ||೫||

 ಸರ್ವಮೂಲ ಗ್ರಂಥಗಳ ಪಾಠ ಪ್ರವಚನ ಮಾಡಿ
ತುರೀಯಾಶ್ರಮವಿತ್ತು"ರಘೋತ್ತಮತೀರ್ಥ" ರೆಂದು ಕರೆದು||೬||

 ಪಿಂಗಳನಾಮ ಸಂವತ್ಸರ ದ ಜ್ಯೇಷ್ಟ  ಬಹುಳ  ತದಿಗಿ
ಮಧ್ವೇಶಕೃಷ್ಣನ  ಪಾದ ಸೇರಿದರು ಬಹು ತ್ವರದಿ||೭||
*********

No comments:

Post a Comment