Monday 6 September 2021

ಗಿರಿಜಾಪತಿ ತವ ಚರಣಕೆ ಎರಗುವೆ ಕರುಣದಿಂದೆನ್ನನು ankita varadesha vittala GIRIJAPATI TAVA CHARANAKE ERAGUVE KARUNADINDENNANU


kruti by ವರದೇಶ ವಿಠಲರು varadesha vittala dasaru


ಗಿರಿಜಾಪತಿ ತವ ಚರಣಕೆ ಎರಗುವೆ

ಕರುಣದಿಂದೆನ್ನನು ಪೊರೆ ಮಹಾದೇವ ಪ


ನಂದಿವಾಹನ ಸುರವೃಂದ ಸುಪೂಜಿತ

ಇಂದ್ರವಿನುತ ಭಕ್ತಾನಂದದಾಯಕನೇ 1


ರುಂಡ ಮಾಲಾಧರ ಶುಂಡಾಲ ಮದಹರ

ಚಂಡವಿಕ್ರಮ ಮೃಕಂಡಜ ವರದ 2


ಭೂಜಗ ವಿಭೂಷ ವಿಜಯ ಸುಪೋಷ

ಅಜಿನಾಂಬರಧರ ತ್ರಿಜಗವಂದಿತನೆ 3


ಗರಕಂಧರ ಹರ ಸುರಗಂಗಾಧರ

ಸ್ಮರಸಂಹರ ನಿಜ ಶರಣರಪಾಲ 4


ವರದೇಶ ವಿಠಲನನಿರುತದಿ ಸ್ಮರಿಸುವ

ಕರುಣಾಕರಭವಹರ ಶಂಕರ ಶಿವ 5

***


No comments:

Post a Comment