Thursday 5 August 2021

ಯಾಕೆ ಕರುಣ ಬಾರದ್ಹರಿಯೆ ಲೋಕನಾಯಕ ನಿನಗೆ ಸರಿಯೆ ankita kamalanabha vittala

 ..


kruti by Nidaguruki Jeevubai


ಯಾಕೆ ಕರುಣ ಬಾರದ್ಹರಿಯೆ

ಲೋಕನಾಯಕ ನಿನಗೆ ಸರಿಯೆ ಪ


ವ್ಯಾಕುಲದಲಿ ಮುಳುಗಿ ಬಹಳ

ಶೋಕಪಡುವ ಜನರ ಕಂಡು ಅ.ಪ


ತಂದೆ ತಾಯಿ ಬಂಧು ಬಳಗ

ಇಂದು ಮುಂದು ಗತಿ ನೀನೆಂದು

ಪೊಂದಿ ನಿನ್ನ ಭಜಿಸದಿರುವ

ಮಂದ ಮತಿಗಳನ್ನೆ ಕಂಡು 1


ಕಾಮ ಕ್ರೋಧ ಲೋಭ ಮೋಹ

ಮದ ಮತ್ಸರದಿ ಮುಳುಗಿ ಮುಳುಗಿ

ಕಾಮಜನಕ ನಿನ್ನ ಮರೆತ

ತಾಮಸ ಜನರುಗಳ ಕಂಡು 2


e್ಞÁನಿಗಳನೆ ಕಂಡು ಪರಮ

ಸಾನುರಾಗದಿಂದ ಪೊರೆವೆ

e್ಞÁನ ಶೂನ್ಯರಾದ ಪರಮ ಅ-

e್ಞÁನಿ ಜನರುಗಳನೆ ಕಂಡು 3


ಪರಮಪುರಷ ನಿನ್ನ ಮಹಿಮೆ

ನಿರುತ ಧ್ಯಾನಿಸುವವರ ಸಂಗ

ಕರುಣದಿಂದ ಪಾಲಿಸಯ್ಯ

ಪರಮ ಕರುಣಾನಿಧಿಯೆ ದೇವ4


ನೊಂದೆ ಭವದ ಬಂಧನದೊಳು

ತಂದೆ ಕಮಲನಾಭ ವಿಠ್ಠಲ

ಬಂಧನಗಳ ಬಿಡಿಸಿ ಸಲಹೊ

ಮುಂದೆ ಶ್ರಮವ ಹರಿಸೊ ಬೇಗ5

***


No comments:

Post a Comment