Saturday 1 May 2021

ಸುಯತೀಂದ್ರ ಕರಕಂಜ ಜಾತ ಸಂಯಮೀ೦ದ್ರ ಸುಬುಧೇಂದ್ರ ankita venkatanatha subudhendra teertha stutih

 subudhendra teertha rayara mutt yati stutih

ರಚನೆ : ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..


ಸುಯತೀಂದ್ರ ಕರಕಂಜ ಜಾತ ।

ಸಂಯಮೀ೦ದ್ರ ಸುಬುಧೇಂದ್ರ -

ಸುಧೇನಿಭನಯ್ಯ ।। ಪಲ್ಲವಿ ।। 


ಸುಜಯೀ೦ದ್ರ ಸುತನ ಪೌತ್ರ ।

ಸುಜನ ಕುಮುದೇಂದು -

ದೇಶಿಕಮಣಿ ।। ಅ ಪ ।।


ಭಕುತರಿಗೆ ಅಮರತರುವಂತೆ ।

ಶ್ರೀಕಾಂತನ ಏಕಾಂತ ಭಕುತನ -

ದಯದಿ ಅಮರ್ದು ನೀಡುವೆ ।। ಚರಣ ।। 


ಏಕ ಚತುರ ನವ ಗ್ರಂಥಗಳ -

ವಿಬುಧಮಣಿಯೇ ।

ಏಕಮೂರ್ತಿ ಬಾದರಾಯಣರ -

ಸಿದ್ಧಾಂತ ಸ್ಥಾಪಕ ।। ಚರಣ ।।


ಮಂತ್ರಾಲಯ ವಾಸ ಮಂತ್ರಾಲಯ-

 ಪುರಾಧೀಶನ ಪ್ರೇಷ್ಠ ।

ಮಂತ್ರಮೇಯ ವೇಂಕಟ-

ನಾಥನ ಸೇವಿಪ ।

ಮಂತ್ರವಿದ ಸುಬುಧೇಂದ್ರ -

ಸುಧಾಹೃದ ಕಾಣೋ ।। ಚರಣ ।।


" ವಿವರಣೆ "

ಕರಕಂಜ ಜಾತ = ಕರ ಕಮಲದಿಂದ ಹುಟ್ಟಿದ 

ಸಂಯಮೀ೦ದ್ರ = ಯತಿ ಶ್ರೇಷ್ಠ  

ಸುಧೇನಿಭನಯ್ಯ = ಅಮೃತ ಸಮಾನಯ್ಯ 

" ಸುಜನ ಕುಮುದೇಂದು "

ಸುಜ್ಜನರೆಂಬ ಕೆನ್ನೈದೆಲೆಗೆ ಚಂದ್ರನಂತಿರುವವರು 

ಅಮರತರು = ಕಲ್ಪವೃಕ್ಷ 

ಅಮರ್ದು = ಅಮೃತ 

ಏಕ ಚತುರ ನವ ಗ್ರಂಥ = ಸರ್ವಮೂಲ

[ 1 + 4 x 9 = 37 ]

ವಿಬುಧ = ಜ್ಞಾನಿ 

ಏಕಮೂರ್ತಿ = ಸರಿಯೇ ಸರ್ವೋತ್ತಮ 

ಮಂತ್ರಮೆಯ = ಮಂತ್ರಗಳಿಂದ ತಿಳಿಯಲ್ಪಡುವವನು - ಶ್ರೀಹರಿ 

ಮಂತ್ರವಿದ = ಮಂತ್ರವನು ತಿಳಿದವರು 

ಸುಧಾಹೃದ = ಅಮೃತದ ಮಡು 

by Nagaraju Haveri, 

by ಆಚಾರ್ಯ ನಾಗರಾಜು ಹಾವೇರಿ, ಗುರು ವಿಜಯ ಪ್ರತಿಷ್ಠಾನ.

****

No comments:

Post a Comment