Sunday 1 August 2021

ಕಂತುಪಿತ ಕರುಣಾಕರ ನಿನ್ನ ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ankita vaikunta vittala

 ..

kruti by ಬೇಲೂರು ವೈಕುಂಠ ದಾಸರು belur vaikunta dasaru


ಕಂತುಪಿತ ಕರುಣಾಕರ ನಿನ್ನ

ಚಿಂತೆಯೊಳಗಿರಿಸಿ ಸಲಹಯ್ಯಾ ಜನಾರ್ದನಾ ಪ


ಮಣ್ಣು ಮರ ಕಲ್ಲಿಂದಲಾದಡಂ ವಿರಚಿಸಿದ

ಹೆಣ್ಣು ರೂಪನೆ ಕಂಡು ಮರುಳುಗೊಂಡೂ

ಉಣ್ಣದುರಿಯುವಮನವ ನಿನ್ನಡಿದಳಿರನೆಳಲ

ತಣ್ಣಸದಲಿರಿಸಿ ಸಲಹಯ್ಯ ಜನಾರ್ದನಾ 1


ಗೋ ವಿಪ್ರ ವಧೆಯಿಂದಲಾದಡಂ ವಿರಚಿಸಿದ

ಲಾವಿಕವೆಂದದನೆ ಬಯಸಿ ಬಯಸೀ

ದೇವ ಮನಕನವರತ ನಿನ್ನ ಪದ ತೀರ್ಥದಾ

ಜೀವನವನಿತ್ತು ಸಲಹಯ್ಯಾ 2


ಭೂಮಿಯದು ಬುಧದಾನ ಸುರದಾನವಾದಡಂ

ಆ ಮಹಿಯ ತನ್ನತ್ತ ಸೆಳೆವೆನೆಂದೂ

ಕಾಮಿಸುವ ಮನಕೆ ನಿನ್ನಮಲಪಾದಾಂಬುಜವ

ಸೀಮೆಯೊಳಗಿರಿಸು ವೈಕುಂಠ ಜನಾರ್ದನಾ 3

***


No comments:

Post a Comment