Wednesday, 11 December 2019

ಕೃಷ್ಣ ಎಂಥಾದೋ ನಿನ್ನ ಕರುಣಿ ankita mahipati

ಕೃಷ್ಣ ಎಂಥಾದ್ದೋ ನಿನ್ನ ಕರುಣ

ಶಿಷ್ಯ ಜನರುದ್ದೇಶಬಂದ್ಯೊ ನೀ ಕರುಣ

ದುಷ್ಟಜನರ ಮಾಡಿದ್ಯೊ ನೀ ಮರ್ದನ

ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣ ll 1 ll


ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ 

ದಿಟ್ಟತನದಲಿ ನಂದಗೋಕುಲದಿ ಬೆಳೆದ್ಯೊ

ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ

ಕುಟ್ಟಿ ಕಂಸಾಸುರನ ಪ್ರಾಣವೆಳೆದ್ಯೊ ll 2 ll


ಮೊಲಿಯನುಂಡು ಕೊಂಡಿ ಪೂತನಿ ಪ್ರಾಣ

ಕಾಲಿಲೊದ್ದು ಕೊಂದ್ಯೋ ಶಕಟಾಸುರನ

ಬಾಲತನದಲಿ ಕೆಡಹಿದ್ಯೊ ಮಾವನ

ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ll 3 ll


ತುರುಗಳ ಕಾಯ್ದ್ಯೊ ನೀ ಗೋವಿಂದ

ಬೆರಳೆಲಿತ್ತಿದ್ಯೊ ಹಿರಿಯ ಮುಕುಂದ

ಮರುಳು ಮಾಡಿದ್ಯೊ ಗೋಪಿಕೇರ ವೃಂದ

ಹರುಷಗೈಸಿದೆ ಅನೇಕ ಪರಿಯಿಂದ ll 4 ll


ಹಾಲು ಬೆಣ್ಣೆ ಕದ್ದು ತಿಂದು ನಿನ್ನಾಟ

ಬಾಲಗೋಪಾಲರ ಕೂಡಿ ನಿನ್ನೂಟ

ಚೆಲುವ ನಾರೇರ ನೋಡುವ ನಿನ್ನೋಟ

ಒಲಿದು ಕುಬ್ಜಿಯ ಬೆನ್ನ ಮಾಡಿದ್ಯೊ ನೀಟ ll 5 ll


ಗುರುಮಗನ ತಂದುಕೊಟ್ಯೋ ನೀ ಪ್ರಾಣ

ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ

ಶರಣಾಗತರ ವಜ್ರಪಂಜರ ಪೂರ್ಣ

ವರಮುನಿಗಳಿಗಾಗಿಹೆ ನೀ ನಿಧಾನ ll 6 ll


ಒಲಿದು ಪಾಂಡವರಿಗಾದಿ ಸಹಕಾರಿ

ಬಲವ ಮುರಿದ್ಯೊ ನೀ ಕೌರವರ ಸಂಹಾರಿ

ಹಲವು ಪರಿ ಆಟ ನಿನ್ನದೊ ಶ್ರೀ ಹರಿ

ಸಲಹುತಿಹೆ ಮಹಿಪತಿಗನೇಕ ಪರಿ ll 7 ll

***


ಭೈರವಿ ರಾಗ ಧುಮಾಳಿ

ಕೃಷ್ಣ ಎಂಥಾದೋ ನಿನ್ನ ಕರುಣಿ
ಶಿಷ್ಟ ಜನರುದ್ದೇಶ ಬಂದ್ಯೊ ನೀ ಕರುಣಿ
ದುಷ್ಟಜನರ ಮಾಡಿದ್ಯೊ ನೀ ಮರ್ದನಿ
ದೃಷ್ಟಿಸಿ ಮಾಡುವೆ ಸಾಧು ಸಂರಕ್ಷಣಿ ||೧||

ಹುಟ್ಟಿ ವಸುದೇವನಲ್ಲಿ ಬಂದು ಹೊಳೆದ್ಯೊ
ದಿಟ್ಟತನದಲಿ ನಂದಗೋಕುಲದಲಿ ಬೆಳೆದ್ಯೊ
ಮೆಟ್ಟಿ ವಿಷದ ಹಾವಿನ ಹೆಡೆಯ ತುಳಿದ್ಯೊ
ಕುಟ್ಟಿ ಕಂಸಾಸುರನ ಪ್ರಾಣವಳಿದ್ಯೊ ||೨||

ಮೊಲಿಯನುಂಡು ಕೊಂದಿ ಪೂತನಿ ಪ್ರಾಣ
ಕಾಲಿಲೊದ್ದು ಕೊಂದಿ ಶಕಟಾಸುರನ
ಬಾಲತನದಲಿ ಕೆಡಹಿದ್ಯೊ ಮಾವನ
ನೆಲೆಯು ತಿಳಿಯದು ಇನ್ನೊಬ್ಬರಿಗೆ ಪೂರ್ಣ ||೩||

ತುರುಗಳ ಕಾಯ್ದ್ಯೊ ನೀ ಗೋವಿಂದ
ಬೆರಳಲೆತ್ತಿದ್ಯೊ ಗಿರಿಯ ಮುಕುಂದ
ಮರುಳು ಮಾಡಿದ್ಯೊ ಗೋಪಿಕೆಯರ ವೃಂದ
ಹರುಷಗೈಸಿದೆ ಅನೇಕ ಪರಿಯಿಂದ ||೪||

ಹಾಲುಬೆಣ್ಣೆ ಕದ್ದು ತಿಂಬುವ ನಿನ್ನಾಟ
ಬಾಲಗೋಪಾಲರ ಕೂಡಿ ನಿನ್ನೂಟ
ಚೆಲುವ ನಾರೇರ ನೋಡ್ವ ನಿನ್ನ ನೋಟ
ಒಲಿದು ಕುಬ್ಜೆಯ ಬೆನ್ನ ಮಾಡಿದ್ಯೊ ನೀಟ ||೫||

ಗುರುಮಗನ ತಂದುಕೊಟ್ಯೊ ನೀ ಪ್ರಾಣ
ಸುರಬ್ರಹ್ಮಾದಿಗಳರಿಯರು ನಿನ್ನ ತ್ರಾಣ
ಶರಣಾಗತರ ವಜ್ರಪಂಜರ ಪೂರ್ಣ
ವರಮುನಿಗಳಿಗಾಗಿಹೆ ನೀ ನಿಧಾನ ||೬||

ಒಲಿದು ಪಾಂಡವರಿಗಾದಿ ಸಹಕಾರಿ
ಬಲವ ಮುರಿದ್ಯೋ ನೀ ಕೌರವರ ಸಂಹಾರಿ
ಹಲವು ಪರಿ ಆಟ ನಿನ್ನದೊ ಹರಿ
ಸಲಹುತಿಹೆ ಮಹಿಪತಿಗನೇಕ ಪರಿ ||೭||
***********

No comments:

Post a Comment