Saturday 19 June 2021

ಹೊಡೆಯಿರೋ ನಗಾರಿ ಗಡಗಡನೆ ಮೂರು ಬಾರಿ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 

ಹೊಡೆಯಿರೋ ನಗಾರಿ  ಗಡಗಡನೆ ಮೂರು ಬಾರಿ    


ದೃಢಭಕ್ತ ಸಮೂಹವ ಸಿರಿಯೊಡೆಯನು ಕೈಬಿಡನೆಂದು   ಅ.ಪ


ವಿಧಿಸೃಷ್ಟಿಯೊಳಿಲ್ಲದರೂ-

ಪದಿ ಬಂದು ನಖದಿ ಅಸುರನ

ಉದರ ಬಗೆದು ಕರುಳ ತೆಗೆದು

ಮುದದಿ ಗಳದಿ ಧರಿಸಿದನೆಂದು 

1

ಪರರು ತನ್ನ ಹಿಂಸೆಗೈ

ದರು ಸಹಿಸಿ ಸಮಾಧಾನದಿ

ಸಿರಿಯರಸನ ನೆನೆವಗೆ ಭಯ

ವಿರದಿರದಿರದಿರದೆಂದು 

2

ದ್ವೇಷಿಗಳನುದಿನ ಯೋಚಿಪ

ಮೋಸಗಳನು ತಿಳಿಯುತ ಲ-

ಕ್ಷ್ಮೀಶನು ಪರಿಹರಿಸಿ ತನ್ನ

ದಾಸರಿಗೊಶವಾಗುವನೆಂದು 

3

ಖಳಜನರ ಮರ್ದಿಸುತ

ಜಲಜನಾಭ ಮೂಜಗದ

ಒಳಹೊರಗೂ ವ್ಯಾಪಿಸುತ

ತಿಳಿಯಗೊಡನು ಸತ್ಯವಿದೆಂದು 

4

ಕಾಮಾದಿಗಳನು ಗೆದ್ದು ಮ-

ಹಾಮಹಿಮರೆನಿಸುವರ ಯೋಗ-

ಕ್ಷೇಮವನ್ನು ವಹಿಸಿಹ ಗುರು-

ರಾಮವಿಠಲ ನರಹರಿಯೆಂದು 

5

***


No comments:

Post a Comment