Monday 2 August 2021

ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ ankita kadarundalageesha vyasaraja stutih

ವ್ಯಾಸರಾಯರು

ಚಂದ್ರಾ ಧರೆಯೊಳು ಮೂಡಿದಾ

ಪ್ರಹ್ಲಾದನೆಂಬ ಚಂದ್ರಾ ಪ


ಹೊಂದಿದವರ ಹೃದಯಾಂಧಕಾರನೀಗುವ ಗುಣ-

ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ.


ವಿಕಸಿತಸತ್ಕುಮುದಕೆ ಬಂಧೂ ಖಳ

ಮುಖಾರವಿಂದವಳಿದು ಕೊಂದೂ

ಸುಖದಿ ಕುಳಿವ ಬುಧಚಕೋರ ತತ್ವ

ಪ್ರಕಾಶಕರ ಚಂದ್ರಿಕಾಪೂರ್ಣನೆಂಬ 1


ಹೇಯಮತಗಳೆಲ್ಲವ ಮುರಿದೂ ಬಲು

ಬಾಯಿಬಾರದೆ ನಿಲ್ಲಲು ಜರಿದೂ

ಮಾಯಿಚೋರರು ಪಲಾಯನಗೈಯಲು

ನ್ಯಾಯಾಮೃತಮಯ ವೃಷ್ಟಿ ಕರೆಸಿದಾ 2


ಕಂಡೂ ಗೋಪಾಲಕೃಷ್ಣನ ಪದವ ಕದ-

ರುಂಡಲಿಗೀಶ ಭಕ್ತನಾಮೋದವ

ಕೊಂಡು ಭೂಮಂಡಲವ ಪಂಡಿತ ಜನಮನ

ತಾಂಡವವಾಡಿದ ತರ್ಕತಾಂಡವ ಮಾಡಿದ 3

*** 

No comments:

Post a Comment