Wednesday, 1 September 2021

ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ಶರಣು ಶರಣು ಶ್ರೀ ದತ್ತಾತ್ರೇಯಾ

ಶರಣು ಸಕಲ ಭುವನಾಶ್ರಯಾ

ಶರಣೆಂಬೆ ಸಿಂಹಾಚಲ ನಿಲಯಾ

ಸುರಜನ ರೇಯಾ ಸಲಹಯ್ಯಾ ll 1 ll


ವನರುಹ ಸಂಭವ ತ್ರಿಲೋಚನ

ಸನಕಾದಿ ಮುನಿ ವಂದಿತ ಚರಣ

ಜನವನ ವಿಜನ ವ್ಯಾಪಕ ಘನ

ಅನಸೂಯಾ ನಂದನ ಯೋಗೀಶಾ ll 2 ll


ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ

ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ

ಸತ್ಯ ಸನಾತನೇ ಮುನಿ ದಿಗಂಬರಾ

ಭಕ್ತ ಸಹಕಾರಾ ಅವಧೂತಾ ll 3 ll


ಕಂದರ್ಪ ಕೋಟಿ ಸುಂದರಾಕಾರಾ

ಹೊಂದಿದಾಭರಣಾನೇಕ ಶೃಂಗಾರಾ

ಇಂದು ಸೂರ್ಯಾನಳ ತೇಜ ವ್ಯಾಪಾರಾ 

ಎಂದೆಂದೆಚ್ಚರಾ ಕಂಡು ನಿನ್ನಾ ll 4 ll


ಮಂದಮತಿ ಬಾಲನ ಬಿನ್ನಾಹದ ಸ್ತುತಿ

ಬಂದು ಅರ್ಪಿಸಿಕೋದುದಿ ಶ್ರೀಪತಿ

ಇಂದು ಮೊರೆ ಹೊಕ್ಕೆನು ಅನನ್ಯಾಗತಿ

ತಂದೇ ಮಹಿಪತಿ ಸುತ ಸ್ವಾಮೀ ll 5 ll

***


ಶರಣು ಶರಣು ಶ್ರೀ ದತ್ತಾತ್ರೇಯಾ ಶರಣು ಸಕಲಾ ಭುವನಾಶ್ರಯಾ ಶರಣೆಂಬೆ ಸಿಂಹಾಚಲ ನಿಲಯಾ ಸುರಜನ ರೇಯಾ ಸಲಹಯ್ಯಾ 1 

ವನರುಹ ಸಂಭವ ತ್ರಿಲೋಚನ ಸನಕಾದಿ ಮುನಿ ವಂದಿತ ಚರಣ ಜನವನ ವಿಜನ ವ್ಯಾಪಕ ಘನ ಅನಸೂಯಾ ನಂದನ ಯೋಗೀಶಾ 2 

ತತ್ವಯೋಗ ಸಿದ್ಧಿ ಬುದ್ಧಿ ದಾತಾರಾ ಸತ್ವ ಗುಣಾಲಂ ಕೃತ ಜ್ಞಾನ ಸಾಗರಾ ಸತ್ಯ ಸನಾತನೇ ಮುನಿ ದಿಗಂಬರಾ ಭಕ್ತ ಸಹಕಾರಾ ಅವಧೂತಾ 3 

ಕಂದರ್ಪ ಕೋಟಿ ಸುಂದರಾಕಾರಾ ಹೊಂದಿದಾಭರಣಾನೇಕ ಶೃಂಗಾರಾ ಇಂದು ಸೂರ್ಯಾನಳ ತೇಜ ವ್ಯಾಪಾರಾ ಎಂದೆಂದೆಚ್ಚರಾ ಕಂಡು ನಿನ್ನಾ 4 

ಮಂದಮತಿ ಬಾಲನ ಬಿನ್ನಾಹದ ಸ್ತುತಿ ಬಂದು ಅರ್ಪಿಸಿಕೋ ದುದಿ ಶ್ರೀಪತಿ ಇಂದು ಮೊರೆ ಹೊಕ್ಕೆನು ಅನನ್ಯಾಗತಿತಂದೇ ಮಹಿಪತಿ ಸುತ ಸ್ವಾಮೀ 5

***


No comments:

Post a Comment