Wednesday 1 September 2021

ಕರವ ಪಿಡಿ ಗುರುರಾಯ ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ ankita shyamasundara

 ..

ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ

ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ

ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ


ಉರಗಕೇತನ ಮೊರೆಯ ಲಾಲಿಸಿ

ತರಣಿಜನಿಗೆರಡೊಂದು ಯುಗದಲಿ

ಧುರದಿ ಸಾರಥಿಯಾಗಿ ಸ್ಯಂದನ

ಭರದಿ ನಡೆಸಿದ ಪರಮ ಪುರುಷನೆ ಅ.ಪ


ಶರಣು ಜನ ಸುರಧೇನು | ಹೇ ತಾತ ನೀ

ಮೂರೆರಡು ಜನುಮಗಳನ್ನು | ಕಳೆದು ಮ

ತ್ತುರುವ ಅವತಾರವನು ಭಕ್ತಿಪೂರ್ವಕ

ಪಿರಿಯರಾಜ್ಞದಿ ನೀನು ಪೂರೈಸಲಿನ್ನು

ಧರಣಿಯೊಳಗವತರಿಸಿ ನರರಿಗೆ

ಅರಿಯದಂದದಿ ಹರಿಯ ದಿಸೆಯೋಳ್

ಹರಿಯ ಸ್ಮರಿಸುತ ಚರಿಪ ಧೊರೆ ತವ

ಚರಣ ದರುಶನಗರೆದು ಕರುಣದಿ 1


ಬಿಡಿಸೊ ಎನ್ನ ಕ್ಲೇಶ ತಡಮಾಡದಲೆ ನೀ

ಕಡಿಯೊ ಈ ಭವ ಪಾಶ | ದೃಢಮನವ ಕೊಡು ನಿ

ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ

ಬಿಡದೆ ಮಾಡುಪದೇಶ ಪೊಡವೀಶದಾಸ

ಒಡೆಯನೇ ನೀನಡಗಿ ಎನ್ನನು

ಕಡೆಗೆ ನೋಡಲು ಪಡೆದ ಜನನಿಯು

ಪಿಡಿದು ಬಾಲನ ಮಡುವಿನೋಳ್ ತಾ

ಬಿಡುವ ತೆರ ತವ ನಡತೆ ಎನಿಪುದು 2


ಮಂದನಾನಿಜವಯ್ಯ | ಸಂದೇಹವಿಲ್ಲದೆ

ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ

ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು

ರಂದರಾರ್ಯರ ಪ್ರೀಯ ಆನಂದ ನಿಲಯ 3

***


No comments:

Post a Comment