surendra teertha rayara mutt yati stutih
ಇಂದಿನ ದಿನ ಸುದಿನವಾಯಿತು ll ಪ ll
ಇಂದಿರೇಶ ಮೂಲರಾಮಚಂದ್ರನ ಪದಕಮಲಗಳ ಸು-
ರೇಂದ್ರತೀರ್ಥಮುನಿಯು ತೋರಲು ll ಅ ಪ ll
ಈತನ ಪದಕಮಲಗಳ ವಿಧಾತ ತನ್ನ ಭವನದೊಳಗೆ l
ಸೀತೆಯ ಸಹ ಪೂಜಿಸಿ ಇಕ್ಷ್ವಾಕು ನೃಪಗಿತ್ತನು ll
ಆತನನ್ವಯ ನೃಪರೆಲ್ಲರು ಪ್ರೀತಿಯಿಂದಲಿ ಭಜಿಸಿ ರಘು- l
ನಾಥ ವೇದಗರ್ಭಗಿತ್ತ ಮೂರ್ತಿಯ ಪದಕಮಲ ಕಂಡೆ ll 1 ll
ಗಜಪತಿ ಭಾಂಡಾರದಲ್ಲಿ ಅಜಕರಕಮಲಾರ್ಚಿತ ಭೂ - l
ಮಿಜೆ ಸಹಿತದಿ ರಾಮನಿರಲು ನಿಜಜ್ಞಾನದಿ ತಿಳಿದು ಬೇಗ ll
ದ್ವಿಜವರಗುರುವೆನಿಸುತಿಪ್ಪ ಸುಜನವಂದಿತ ನರಹರಿಮುನಿ l
ರಜನಿಯಲ್ಲಿ ತಂದ ಸುಲೋಹಮಯ ಪ್ರತಿಮೆಯನೆ ಕಂಡು ll 2 ll
ಅಂದವುಳ್ಳ ಮೂಲರಾಮಚಂದ್ರನ ಪದಕಮಲಗಳನು l
ವೃಂದಾರಕವೃಂದ ವಂದ್ಯನೆಂದೆನಿಸುವ ಪವನನಾ ll
ನಂದನಗುರು ಶ್ರೀಮದಾನಂದತೀರ್ಥರರ್ಚಿಸಿ ನಿಜ l
ಅಂದದನ್ವಯದೊಳಿಟ್ಟ ಪುರಂದರವಿಟ್ಠಲನ ಕಂಡು ll 3 ll
***
ರಾಗ : ಬಿಲಹರಿ ತಾಳ : ಝಂಪೆ
ಇಂದಿನ ದಿನ ಸುದಿನವಾಯಿತು ।
ಇಂದಿರೇಶ ಮೂಲರಾಮ-
ಚಂದ್ರನ ಪದ ಕಮಲಗಳು । ಸು ।
ರೇಂದ್ರತೀರ್ಥ ತೋರಿಸೆ ।। ಪಲ್ಲವಿ ।।
ಈತನ ಪದ ಕಮಲಗಳ । ವಿ ।
ಧಾತ ತನ್ನ ಸದನದೊಳಗೆ ।
ಸೀತೆಯ ಸಹ ಪೂಜಿಸೆ । ನರ ।
ನಾಥ ಇಕ್ಷ್ವಾಕುನಿಗೆಯಿತ್ತ ।।
ಆತನನುಸರಿದ ನೃಪರು ।ಪ್
ರೀತಿಯಿಂದಲರ್ಚಿಸಿ । ರಘು ।
ನಾಥ ವೇದಗರ್ಭಗಿತ್ತ ।
ನಾಥನ ಮೂರ್ತಿಯನು ಕಂಡು ।। ಚರಣ ।।
ಗಜಪತಿಯ ಭಂಡಾರದಲಿ ।
ಅಜನು ಪೂಜಿತನಾಗಿ । ಭೂ ।
ಮಿಜೆ ಸಹಿತ ಶ್ರೀರಾಮ ನಿರಲು ।
ನಿಜ ಜ್ಞಾನದಿಂದ ತಿಳಿದಾಗಾ ।।
ಸುಜನ ಗುರುವೆಂದೆನಿಸುವ ನಮ್ಮ ।
ಭಜಕ ಪಾಲಕ ನರಹರಿ ಮುನಿಪ ।
ಈ ಜಗವರಿಯ ಶ್ರೀ । ಅಂ ।
ಬುಜಲೋಚನ ಮೂರುತಿಯ ಕಂಡು ।। ಚರಣ ।।
ಅಂದವುಳ್ಳ ಮೂಲರಾಮ ।
ಚಂದ್ರನ ಪದಯುಗಳನು ।
ವೃಂದಾರ ಕೇಂದ್ರವೆನಿಸುವಾ ।
ನಂದತೀರ್ಥ ಮುನಿಗಳಾ ।।
ನಂದದಿಂದಲರ್ಚಿಸಿ ನಮ್ಮನು ।
ಹೊಂದಿದ ಶಿಷ್ಯರ ಕರದ । ದಯ ।
ದಿಂದ ನಿಜಾನ್ವಯದೊಳಿಟ್ಟ । ಪು ।
ರಂದರವಿಠ್ಠಲನ ಸುರೇಂದ್ರ ಮುನಿಪ ।
ತಂದು ತೋರಲು ।। ಚರಣ ।।
****
No comments:
Post a Comment