Saturday 1 May 2021

ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ಸನ್ನುತ ಚರಣ ankita narasimha vittala brahmanya teertha stutih

ಶ್ರೀ ನರಸಿಂಹದಾಸರು ( ಶ್ರೀ ಜಗನ್ನಾಥದಾಸರ ತಂದೆ )... 


ರಾಗ : ಅಹರಿ ರಾಗ : ಏಕ 


ನಂಬಿದನೋ ಬ್ರಹ್ಮಣ್ಯತೀರ್ಥಾರ್ಯ ।

ಸನ್ನುತ ಚರಣ ಪಾವನ ಸುಚರ್ಯಾ ।। ಪಲ್ಲವಿ ।। 

ಘನ್ನ ಭವದ ಭಯವನ್ನು ಕಳೆದು । ಯತಿ ।

ರನ್ನ ಯೆನ್ನನು ಧನ್ಯನ ಮಾಡೋ ।। ಅ. ಪ ।। 

ಪುರುಷೋತ್ತಮ । ಸುತೀ ।

ರ್ಥರ ಪ್ರಿಯ ಸುಕುಮಾರ ।

ದುರಿತೌಘ ಜೀಮೂತ ಚಂಡ ಸಮೀರ ।

ಸುರರುಚಿ ತುಳಸೀ ಪಂಕಜಮಣಿ ಹಾರ ।।

ಧರಿಸಿ ಮೆರೆವೋ ದಿನಕರನವತಾರ ।

ಕರುಣದಿ ತವ ಶ್ರೀಕರ ಚರಣಾಂಬುಜ ।

ದರುಶನವ ಕೊಡು ಗುಣಗಣ ನಿಧಿಯೇ ।। ಚರಣ ।। 

ಸೇವಿಪ ಜನರಿಗೆ ದೇವತರುವೆನಿಪ ।

ಶ್ರೀವಿಠ್ಠಲ ತಾವರೆ ಮಧುಪಾ ।

ಕೋವಿದ ಜನರು ಸಂಭಾವಿಸಿ ಸ್ತುತಿಪ ।।

ಪಾವನ್ನ ಪಾದಾರ್ಚಿತ ಭಾವಜ ಮುನಿಪಾ ।

ಪಾವನ ಸುಮತನ ಜೀವರ ಚಂದ್ರನೆ ।

ಪಾವನ ಮತಿ ಕೊಡು ನೀ ಒಲಿದೆನಗೆ ।। ಚರಣ ।। 

ಹರಿಭಕ್ತಿ ವೈರಾಗ್ಯ ಪರತತ್ತ್ವಜ್ಞಾನ ।

ವರದ ಪಾಲಿಸು ಸರ್ವವಿದ್ಯಾ ಪ್ರವೀಣ । ನ ।

ರಸಿಂಹವಿಠ್ಠಲ ಶ್ರೀ ಹರಿ ಸನ್ನಿಧಾನ ।।

ಕರುಣಾಪಾತ್ರನೇ ದಿವ್ಯವರ ಪೂರ್ಣ ಜ್ಞಾನ ।

ಹರಿಗುರು ಭಜನ ತ್ವತ್ಪದ ವ್ಯಾಸಾರ್ಯರ ।

ಗುರುವೆಂದೆನಿಸಿದೆ ಧರೆಯೊಳು ಮೆರೆದೆ ।। ಚರಣ ।। 

****


No comments:

Post a Comment