Saturday 1 May 2021

ತಿರುನಲ್ವೇಲಿಲಿ ಮೆರೆವ ಗುರು ವಿಬುಧೇಂದ್ರರ ಚರಣ ವಾರಿಜ ಸ್ತುತಿಪೆ ankita lakumeesha vibudhendra teertha stutih

 vibudhendra teertha rayara mutt yati stutih

ರಾಗ : ಭೈರವಿ   ತಾಳ : ರೂಪಕ 

ತಿರುನಲ್ವೇಲಿಲಿ ಮೆರೆವ ।

ಗುರು  ವಿಬುಧೇಂದ್ರರ ।

ಚರಣ ವಾರಿಜ ಸ್ತುತಿಪೆ ।। ಪಲ್ಲವಿ ।।


ವರ ಅಹೋಬಲ ಹರಿಯು ಸ್ವಪ್ನದಿ ।

ದೊರೆಯುವೆ ನಿಮಗೆ ಪರಮ ತೀರ್ಥರೆನೆ ।

ನರಹರಿ ಹದಿನಾರು ಭುಜದಲಿ ।

ತ್ವರ ಸುತೀರ್ಥದಿ ಬರಲಿಗೊಂಡಂಥ ।। ಅ ಪ ।।

ರಘುನಾಥ ಭಟ್ಟರೆನಿಸಿ ಪೂರ್ವದಿ ।

ಸುಗುಣ ಪಂಡಿತರೆನಿಸೆ ।

ಜಗದ ಬುಧರಿಂದ ಮಾನ್ಯರೆನಿಸಿದ ।।

ನಗೆ ಮುಖ ರಾಮಚಂದ್ರೆತಿ ।

ಮಿಗೆ ಸುಸಂಸ್ಕಾರದಿ ಯತಿಯಗೈಯ್ಯೆ ।

ನಿಗಮ ಶಾಸ್ತ್ರದ ಪಥದಿ ನಡೆದಂಥ ।। ಚರಣ ।।


ಆದಿ ಶ್ರೀಪಾದರಾಜರಿಗೆ ಶ್ರೀ ವ್ಯಾಸರಾಜರಿಗೂ ।

ಮೋದದಿ ವಿದ್ಯಾ ಬೋಧಕರು ।

ವಾದದಿ ದುರ್ವಾದಿಗಳ ಗೆದ್ದು ।।

ಸಾಧಿಸಿ ಜಯ ಪತ್ರ ಪ್ರತಿದಿನ ।

ಮಾದೇವಿ ನರಹರಿಗೆ ಅರ್ಪಿಸಿ ।

ಭೇದಮತ ಧ್ವಜ ಎತ್ತಿ ಮೆರೆದಂಥ ।। ಚರಣ ।।

ಐವತ್ತೈದು ವರ್ಷ 

ಶ್ರೀವೇದಾಂತ ರಾಜ್ಯವಾಳಿ ।

ಕೋವಿದರನು ಪೋಷಿಸಿ ।

ಭಾವ ಶುದ್ಧಿಲಿ ಲಯವ ಚಿಂತಿಸಿ - ।।

ಶ್ರೀಶ ಲಕುಮೀಶನಂಘ್ರಿಯ ।

ತೋಷದಿಂದಲಿ ಒಲಿಸಿ । ಮಾರ್ಗಶಿ ।

ರ ಶುದ್ಧ ದಶಮಿ 

ವೃಂದಾವನ ಸೇರ್ದ ।। ಚರಣ ।।

****


No comments:

Post a Comment