Saturday, 1 May 2021

ಬಾರೋ ಶ್ರೀ ನರಹರಿಯೇ ಭವ ಬಂಧ ಮೋಚಕ ಬಾ ankita gurushreesha vittala

 " ಶ್ರೀ ನೃಸಿಂಹದೇವರ ಸ್ವಪ್ನ ಸೂಚನೆ "

ಬಾರೋ ಶ್ರೀ ನರಹರಿಯೆ l

ಭವಬಂಧ ಮೋಚಕ ಬಾ ಬಾ ಬಾ ll ಪ ll


ನಂದಗೋಪನ ಕಂದಾ ಹರಿ ಮುಕುಂದಾ l

ಸುಂದರ ಮಂದರೋದ್ಧರ ಧಾರಾ l

ಸಿಂಧುಶಯನ ಗೋವಿಂದ ಇಂದಿನ l

ಮಂದಮತಿಗೆ ಸ್ವಾನಂದವೀಯಲು ಬಾ ಬಾ ಬಾ ll ಅ ಪ ll


ಗಾಡಾಂಧಕಾರದೊಳು ಸ್ವೇಚ್ಛೆಯಲಿ ನಾ l

ಕಿಡಿಗೇಡಿ ಜೀವನಾನಾಗಲು l

ನೀಡದಂದಲಿಪ್ಪ ಲಿಂಗದೊಳಾಡು l

ತಾಡುತ ದೂಡಿ ಎನ್ನನು l

ಬೇಡಿಗೊಳಿಸಿ ಕಾಡೊಳಟ್ಟಿದಿ l

ನಾಡ ರಕ್ಷಿಪ ಗಾಡಿಕಾರನೆ ll 1 ll


ಏಸು ಜನ್ಮಗಳ್ಹೋದವೊ ಈ ವಿಧದಿ ಮುನ್ನೇ l

ಸು ಜನ್ಮಗಳುಳಿದವೊ l

ದಾಸ ನಾನಿಹೆ ಕ್ಷೇಶದಿಂದಲಿ l

ಘಾಸಿಯಾಗುವೆ ಮೋಸಮಾಡದೆ l

ಶ್ರೀಶ ನೀ ಭವಪಾಶ ಕಡದೆನ್ನಾ l

ಶೆ ಪೂರ್ತಿಸೊ ವಾಸುದೇವನೆ ll 2 ll


ಪ್ರಾರಬ್ಧವದು ಯಾವದೊ ನಿನ್ನಿಚ್ಛೆಯಲ್ಲದೆ l

ಬೇರಿಹುದಲ್ಲವದು l

ದಾರಿಗಾಣೆನೋ ದೂರ ನೋಡದೆ l

ಪಾರ ಮಾಡ್ವದನಂತ ಮಹಿಮನೆ l

ಸೇರಿಸೆನ್ನ ರಮೇಶ ಪಾದಕೆ l

ಸೇರಿಸೆನ್ನ ಮಾರಪಿತ ಗುರುಶ್ರೀಶವಿಟ್ಠಲ ll 3 ll

***


ರಾಗ : ಪೂರ್ವೀ  ತಾಳ : ತ್ರಿವಿಡಿ 


ಬಾರೋ ಶ್ರೀ ನರಹರಿಯೇ ।

ಭವ  ಬಂಧ ಮೋಚಕ 

ಬಾ ಬಾ ಬಾ ।। ಪಲ್ಲವಿ ।।


ನಂದ ಗೋಪನ 

ಕಂದ ಹರಿ ಮುಕುಂದಾ ।

ಸುಂದರ ಮಂಧರೋದ್ಧರ ಧಾರಾ ।

ಸಿಂಧುಶಯನ ಗೋ-

ವಿಂದ ಇಂದಿನಾ ।

ಮಂದಮತಿಗೆ ಸ್ವಾನಂದವೀಯಲು 

ಬಾ ಬಾ ಬಾ ।। ಅ ಪ ।।


ಗಾಡಾಂಧಕಾರದೊಳು 

ಸ್ವೇಚ್ಛೆಯಲಿ ನಾ ।

ಕಿಡಿಗೇಡಿ ಜೀವನಾನಾಗಲು ।

ನೀಡದಂದಲಿಪ್ಪ 

ಲಿಂಗದೊಳಾಡು ।।

ತಾಡುತ ದೂಡಿ ಯೆನ್ನೆನು ।

ಬೇಡಿಗೊಳಿಸಿ ಕಾಡೊಳಟ್ಟದಿ ।

ನಾಡ ರಕ್ಷಿಪ ಗಾಡಿಕಾರನೇ ।। ಚರಣ ।।


ಏಸು ಜನ್ಮಗಳ್ಹೋದವೋ 

ಈ ವಿಧದಿ  । ಮು ।

ನ್ನೇಸು ಜನ್ಮಗಳು ಳಿದವೋ ।

ದಾಸ ನೀನಿಹೆ ಕ್ಲೇಶದಿಂದಲಿ ।।

ಘಾಸಿಯಾಗುವೆ ಮೋಸ ಮಾಡದೆ ।

ಶ್ರೀಶ ನೀ ಭವ ಪಾಶ । ಕಡದೆ ।

ನ್ನಾಶೆ ಪೂರ್ತಿಸೋ 

ವಾಸುದೇವನೇ ।। ಚರಣ ।।


ಪ್ರಾರಬ್ಧವದು ಯಾವುದೋ 

ನಿನ್ನಿಚ್ಛೆಯಿಲ್ಲದೆ ।

ಬೇರಿಹುದಲ್ಲವದು ।

ದಾರಿಗಾಣೆನೋ 

ದೂರ ನೋಡದೆ ।।

ಪಾರ ಮಾಡ್ವದನಂತ 

ಮಹಿಮನೆ ।

ಸೇರಿಸೆನ್ನ ರಮೇಶ ಪಾದಕೆ ।

ಮಾರಪಿತ ಗುರು -

ಶ್ರೀಶ ವಿಠ್ಠಲ।। ಚರಣ ।।

****

No comments:

Post a Comment