Saturday 1 May 2021

ರಮಾಕಾಂತ ವಿಠಲನೇ ನೀನವರ ankita tandemuddu mohana vittala ramakanta vittala dasa stutih

 ಶ್ರೀ ತಂದೆ ಮುದ್ದು ಮೋಹನದಾಸರು...

ಕ್ರಿ ಶ 1924 ಶ್ರೀ ಕೃಷ್ಣರಾಯರಿಗೆ......

" ರಮಾಕಾಂತ ವಿಠಲ " 

ಯೆಂಬ ಅಂಕಿತದೊಂದಿಗೆ ಮಂತ್ರೋಪದೇಶ ಮಾಡಿ ಪರಮಾನುಗ್ರಹ ಮಾಡಿದರು. 


ರಮಾಕಾಂತ ವಿಠಲನೇ ನೀನವರ 

ಸಲಹ ಬೇಕೋ ಹರಿಯೇ ।। ಪಲ್ಲವಿ ।।


ದೀನನಾಥನೇ ಕೈಪಿಡಿದು 

ಉದ್ಧರಿಸಿ ಕಾಪಾಡೋ ಹರಿಯೇ ।

ಮನ್ಮನೋರಥ ದಾತಾ ಸ್ವಾಮೀ 

ಶ್ರೀ ಹರಿಯೇ ಕಾಪಾಡಬೇಕಿವನಾ ।। ಅ ಪ ।।


ಹರಿ ಗುರು ಭಕ್ತಿ ಮೊದಲಾದ 

ಸದ್ಗುಣವನೇ ಕೊಟ್ಟು ।

ಪರಮ ದಯದಿಂದ ಇಹಪರದಿ 

ಕಾಪಾಡೋ ಹರಿಯೇ ।

ಕರಿ ವರದ ಕಾಮಿತಾರ್ಥವನಿತ್ತು ।

ಕರುಣದಿಂದಲಿ ಕಾಪಾಡೋ 

ಹರಿಯೇ ।। ಚರಣ ।।


ದೋಷ ದೂರನೇ 

ಕೃಷ್ಣ ಶೇಷಗಿರಿ 

ವಾಸ ಕೃಪಾಸಾಂದ್ರ ನೀ 

ಸಲಹಬೇಕೋ ಹರಿಯೇ ।

ಶೇಷ ಪರ್ಯಂಕ 

ಶಯನ ಶ್ರೀ ಹರಿಯೇ । ಸಂ ।

ತೋಷವನೆ ಕೊಟ್ಟು ನೀ 

ಕಾಪಾಡೋ ಹರಿಯೇ ।। ಚರಣ ।।


ಧರ್ಮ ಕಾಮಾರ್ಥ ಮೊದಲಾದ 

ಪುರುಷಾರ್ಥವನೆ ಕೊಟ್ಟು 

ನ್ಮುದದಿ ಕಾಯೋ ಹರಿಯೇ । 

ಮ ಸ್ವಾಮಿ ಕೈವಲ್ಯದಾಯಕ 

ತಂದೆಮುದ್ದು ಮೋಹನ ವಿಠಲನೇ 

ನೀನೀವನ ನಿರ್ಮಲ ಮನದಿ 

ನಿಂತು ಧರ್ಮ ಪ್ರೇರಕನಾಗಿ

ಸಲಹೋ ಹರಿಯೇ ।। ಚರಣ ।।

****

No comments:

Post a Comment