Monday 2 August 2021

ಈತನೇನೆ ಮುಖ್ಯ ಪ್ರಾಣದೇವರು ಖ್ಯಾತಿಯ ಪಡೆದ ರಾಮ ದೂತನು ankita kalimardhanakrishna

ಈತನೇನೆ ಮುಖ್ಯ ಪ್ರಾಣದೇವರು ಪ.


ಖ್ಯಾತಿಯ ಪಡೆದ ರಾಮ ದೂತನು ಅ.ಪ.


ಅಂಜನೆಯ ಕುಮಾರ ರಾಕ್ಷಸರ ಸಂಹಾರ

ಸಂಜೀವನವ ತಂದ ಧೀರ ಸಾಗರವ ದಾಟಿದ 1


ಕುಂತಿಯಾ ಕಂದ ಕೀಚಕನ ಕೊಂದ

ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ 2


ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ

ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ 3

****


No comments:

Post a Comment