Saturday 1 May 2021

ಗುರುಗಳ ಮನದಿ ಕಂಡು ಧನ್ಯನಾದೆ ankita guruvijaya vittala vijaya dasa stutih

 ..by modalakallu sheshadasaru

 ಶ್ರೀ ಮೊದಲಕಲ್ಲು ಶೇಷದಾಸರು 


ಗುರುಗಳ ಮನದಿ ಕಂಡು ಧನ್ಯನಾದೆ ।

ಸಿರಿ ಅರಸನಾ ದಾಸರು-

ವಿರಾಯರಾಯರು ।। ಪಲ್ಲವಿ ।। 


ಶ್ಯಾಮಸುಂದರ ಕಾಯ -

ನಾಮ ದ್ವಾದಶ ಮುದ್ರೆ ।

ವಾಮನ ರೂಪವ ಧರಿಸಿ -

ಕೋಮಲ ತುಳಸಿಯು ।

ಕಮಲಾಕ್ಷಿ ಮಣಿಗಳಿಂದ-

ವಿಮಲ ಚಿತ್ತದಿ ।

ಕಾಮನಯ್ಯನ ಸಾಮ-

ಗಾನದಿ ಪೊಗಳುವ | ಚರಣ |


*ಹಿಂದೆ ಪುರಂದರದಾಸರ -

ಕಂದನಾಗಿ ಪುಟ್ಟಿ ।

ತಂದೆ ವಾಕ್ಯವ ತಾಳಿ -

ಇಂದು ಧರಿಗೆ ಬಂದು ।

ಇಂದಿರೇಶನ ಚರಿತ್ರೆಯು -

ಕುಂದದಲೆ ಬೀರಿ ।

ಮಂದ ಮತಿಗಳಿಗೆ -

ಮಂದರಧರನ ತೋರಿದ ।। ಚರಣ ।। 


ಗುರುಗಳ ಹೃದಯವಾಸ-

ಗುರುವಿಜಯವಿಠ್ಠಲನ ।

ಸಿರಿ ಪಾದ ಪದುಮ -

ಕರುಣವ ತೋರಿಸಿ ।

ಸಾರ ಹೃದಯದಿ -

ಹರಿಯ ಕೊಂಡಾಡಿಸಿ ಎರಗೆ ।

ಪರಮ ಸುಖದೊಳೀ-

ರುವಂತೆ ಮಾಡಿದ ।। ಚರಣ ।।

****

No comments:

Post a Comment