Friday 6 August 2021

ಜಯ ಮಂಗಳಂ ನಿತ್ಯ ಶುಭ ಮಂಗಳಂ ದಯಾಂಬುಧಿ ಶ್ರೀ ankita bheemashankara

 ..

 kruti by ಭೀಮಾಶಂಕರರು ದಾಸರು bheemashankara


ಜಯ ಮಂಗಳಂ ನಿತ್ಯ ಶುಭ ಮಂಗಳಂ | ದಯಾಂಬುಧಿ ಶ್ರೀ ಮಹಾ ಪಾದ ತೀರ್ಥಕ್ಕೆ ಪ


ಅಜ್ಞಾನ ಮಲನಾಶ ಮಾಡುವ ತೀರ್ಥಕ್ಕೆ | ಜನ್ಮ ಕರ್ಮಗಳ ಪರಿಹರಿಸುವ ತೀರ್ಥಕ್ಕೆ | ಜ್ಞಾನ ವೈರಾಗ್ಯವನು ಸಿದ್ಧಿಸುವ ತೀರ್ಥಕ್ಕೆ |ಘನ ಗುರುವಿನ ನಿಜ ಪಾದ ತೀರ್ಥಕ್ಕೆ || ಜಯ || 1


ತಾಪತ್ರಯವನು ಪರಿಹರಿಸುವ ತೀರ್ಥಕ್ಕೆ | ಅಪರಿಮಿತವಾದ ಭವ ಹರಿಸುವ ತೀರ್ಥಕ್ಕೆ | ಇಪ್ಪತ್ತೈದು ತತ್ತ್ವ ಪಾವನಗೈದ ತೀರ್ಥಕ್ಕೆ |ಕೃಪನಿಧಿ ತಾರಿಸಿದ ಗುರುಪಾದ ತೀರ್ಥಕ್ಕೆ || ಜಯ || 2


ವಿಪ್ರಪಾದಾದಲ್ಲಿ ದಕ್ಷಿಣಾ ಭಾಗದಲಿ | ತಪ್ಪದೆ ವಾಸವಾಗಿಹ ತೀರ್ಥಕ್ಕೆ |ಒಪ್ಪುತೆ ಶಿರಸ್ಸಿನೊಳು ಧರಿಸಿಕೊಂಡಿಹ ಹರನ | ತಾಪ ನಾಶವಗೈವ ಗುರುಪಾದ ತೀರ್ಥಕ್ಕೆ || ಜಯ || 3


ಜಗದೊಳಗಿನ ತೀರ್ಥ ಸಾಗರದೊಳಿರುತಿಹವು | ಸಾಗರಾಂತ ಸಹ ಪರಿವಾರದಿ | ಅಘವ ಹರಿಸುವದೆಂದು ಜಗದೊಡೆಯನ ಪಾದದಿ |ಬೇಗನೆ ಬಂದು ಮಡಿಯಾಗುವ ತೀರ್ಥಕ್ಕೆ || ಜಯ || 4


ಕಮಲನಯನ ಕಮಲೋದ್ಭವರೆಲ್ಲರು | ವಿಮಲಮಹ ಪದಗಳನು ಹೃದಯದಲಿ ಧರಿಸಿ | ಬ್ರಹ್ಮಾಂಡಕೋಟಿಗಳನು ಉದ್ಧರಿಸುವ ತೀರ್ಥಕ್ಕೆ |ಭೀಮಾಶಂಕರನು ಸೇವಿಸಿದ ಗುರುಪಾದ ತೀರ್ಥಕ್ಕೆ || ಜಯ5

***


No comments:

Post a Comment