Thursday 5 August 2021

ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು ಪಾಲಿಸೆನ್ನೆ ಜೀವರೋತ್ತಮ ankita vittalavyasa

 .

kruti by baddannayyacharyaru ಬಡಣ್ಣಯ್ಯಾಚಾರ್ಯರು

ankita vittala vyasa


ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು

ಪಾಲಿಸೆನ್ನೆ ಜೀವರೋತ್ತಮ ಪ


ರಾಮದೂತನೆನಿಸಿಕೊಂಡ್ಯೋ ನೀ ರಾಕ್ಷಸರ

ವನವನೆಲ್ಲ ಕೆಡಿಸಿ ಬಂದ್ಯೋ ನೀ

ಭೂಮಿಪುತ್ರಿಗೆ ಮುದ್ರೆಯಿತ್ತು ಜಗತ್ತಿಗೆಲ್ಲ

ಹರುಷವಿತ್ತು ಪ್ರಖ್ಯಾತನಾದ್ಯೋ ನೀ 1

ಗೋಪಿಸುತನ ಪಾದಪೂಜಿಸಿ ಗದೆಯ ಧರಿಸಿ

ಕೌರವಕುಲವ ಸವರಿದ್ಯೋ ನೀ

ದ್ರೌಪದಿಯ ಮೊರೆಯ ಕೇಳಿ ಕಷ್ಟವೆಲ್ಲ

ಬಿಡಿಸಿ ಭೀಮರೂಪನೆನಿಸಿದ್ಯೋ ನೀ 2

ಮದ್ಯಗೇಹದಲ್ಲಿ ಜನಿಸಿ ಬಾಲ್ಯತನದ

ಮಷ್ಕರಿಯ ರೂಪಗೊಂಡ್ಯೋ ನೀ

ವೇದ ವಿಠಲವ್ಯಾಸದಾಸನಾಗಿ ಭಾಷ್ಯವನೋದಿ

ಸನ್ಮುದದಿಂದ ಸಂತೆಬಿದನೂರಿನಲ್ಲಿ ನಿಂತ್ಯೋ ನೀ 3

***




No comments:

Post a Comment