Friday 27 December 2019

ಕಂಡೆ ಕರುಣಿಗಳೊಳಗೆ ankita gopala vittala vyasa tatwajna teertha stutih

ಶ್ರೀ ಗೋಪಾಲದಾಸರು on vyasa tatwajna teertharu (earlier name venkataraacharya)

ರಾಗ : ಕಲ್ಯಾಣಿ ತಾಳ : ಝ೦ಪೆ

ಕಂಡೆ ಕರುಣಿಗಳೊಳಗೆ ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।

ಕೊಂಡಾಡಲಿವರನು ಎಷ್ಟರವ ನಾನು ।
ಕಂಡೆ ಯನ್ನ ಮನಕುತ್ಸಾಹವಾಗಿ ।। ಆ. ಪ ।।

ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ ಹರಿಪರರಾಗಿ ।
ಇರುವ ಮಹಾ ಸುಗುಣರನ್ನು ಇಂದು ।। ಚರಣ ।।
********

ರಾಗ : ಕಲ್ಯಾಣಿ ತಾಳ : ಝ೦ಪೆ
ಕಂಡೆ ಕರುಣಿಗಳೊಳಗೆ 
ಅಗ್ರೇಸರರಾದ ।
ಪಂಡಿತ ರಾಮಾರ್ಯರ ।। ಪಲ್ಲವಿ ।।
ಕೊಂಡಾಡಲಿವರನು 
ಎಷ್ಟರವ ನಾನು ।
ಕಂಡೆ ಯನ್ನ ಮನ-
ಕುತ್ಸಾಹವಾಗಿ ।। ಆ. ಪ ।।
ಸಿರಿ ವೆಂಕಟ ನರಸಿಂಹಾಚಾರ್ಯರೆಂಬ ।
ವಾರ ಕ್ಷೀರ ಶರಧಿಯಲ್ಲಿ ।
ಪರಮ ಶೋಭಿತ ಚಂದ್ರನಂತೆ 
ಉದ್ಭವಿಸಿ ।ಸುಜ ।
ನರಿಗೆ ಆಹ್ಲಾದನಾಗಿ ।।
ವರ ವೇದ ಶಾಸ್ತ್ರಗಳನೋದಿಸಿ 
ಶಿಷ್ಯ ಜನಕೆ ।
ವರದೊರೆದು ಉಪದೇಶಿಸಿ ।
ಮರಿಯದೆ ಎಂದು ಕ್ಷಣ ಬಿಡದೆ 
ಹರಿಪರರಾಗಿ ।
ಇರುವ ಮಹಾ ಸುಗುಣರನ್ನು 
ಇಂದು ।। ಚರಣ ।।
**
to check whether following belongs to the same song
ಚರಣವೆಂದರೆ ಇವರ 
ಚರಣವೇ ಸುಖಕರ ।
ಹರಿಯಾತ್ರ ಪರವಾಗಿ ಇನ್ನು ।
ಕರಗಳೆಂದರೆ ಇವರ 
ಕರವೇ ಮಂಗಳಕರ ।
ಹರಿ ಪೂಜೆಯಲ್ಲಿ ಸತತ ।।
ಕರಣಗಳು ಮುಂತಾದ 
ಸರ್ವೇ೦ದ್ರಿಯಗಳಿಂದ ।
ಹರಿಯನ್ನೇ ವಿಷಯಕರಿಸಿ ।
ಇರುವ ಅನುಭೋಗವು 
ಇರತೋರಿ ತಮ್ಮ ನಿಜ ।
ಕುರಹ ನೋಡೆಂದು ಚ-
ಪ್ಪರಿಸಿ ಬಿಗದಪ್ಪಿದುದ ।। ಚರಣ ।।
ಏಸು ಜನ್ಮದ ಸುಕೃತ 
ಎನಗಿವರ ಕರುಣ । ಉಪ ।
ದೇಶ ಸ್ವಪನದಿ ಆದುದು ।
ಕೇಶವನೇ ಈ ರೂಪದಿ 
ಹೇಳಿದನ್ಹ್ಯಾಗೋ ।
ಲೇಶನಾ ಅಂದವನು ಅಲ್ಲ ।।
ದಾಸ ಗುರು ವಿಜಯರಾಯರೇ 
ಇಲ್ಲಿ ನಿಂದೆನ್ನ ।
ಪೋಷಿಸುವ ಬಗೆಯು ಹೇಗೋ ।
ವಾಸುದೇವ ಹಯಾಸ್ಯ 
ಗೋಪಾಲವಿಠಲನ ।
ದಾಸರೊಳುಗುತ್ತಮರ 
ದಯಕೆ ಸರಿಯುಂಟೆ ।। ಚರಣ ।।
*****

No comments:

Post a Comment