Wednesday 1 September 2021

ಏತಕೆ ಬಾರದೊ ಹರಿಯೆ ನೀತವೆ ಇದು ಸರಿಯೆ ankita vasudeva vittala

..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಏತಕೆ ಬಾರದೊ ಹರಿಯೆ

ನೀತವೆ ಇದು ಸರಿಯೆ ಪ


ಖ್ಯಾತ ನಿಗಮ ಸಂಗೀತನಾಮ ಜಲ

ಜಾತನಯನ ಬಹುಪ್ರೀತಿ ಮಾಡಿದರು ಅ.ಪ


ಕುಂದರದನ ಕುರುವಿಂದಾಧರ ಪೂ

ರ್ಣೇಂದು ವದನ ಮುನಿವಂದ್ಯ

ಎಂದಿಗೆ ಈ ಭವಬಂಧ ಬಿಡಿಸಿ ದಯ

ದಿಂದ ತೋರುವಿಯಾನಂದ

ಕುಂದುಗಳೆಣಿಸದೆ ಚಂದದಿ ಸಲಹಲು

ಎಂದೆಂದಿಗು ನೀ ಗತಿಯೆಂತೆಂದರು 1


ಮಾರಜನಕ ಗಂಭೀರ ಹೃದಯ ಸಂ

ಚಾರ ಭಜಕ ಮಂದಾರ

ತೋರು ನಿನ್ನ ಪದ ಸಾರಸವನು ಮುನಿ

ನಾರದಾದಿ ಪರಿವಾರ

ಘೋರ ಶರಧಿಯೊಳು ಸೇರಿದವರಿಗಿ

ನ್ನಾರು ಬಂದು ಉದ್ಧಾರ ಮಾಡುವರು 2


ಶ್ರೀಶ ಯದುಕುಲಾಧೀಶ ಮೇಘ ಸಂ

ಕಾಶ ರೂಪ ಸರ್ವೇಶ

ಘಾಸಿಪಡಿಪ ವಿಷಯಾಸೆಗಳೆಲ್ಲವ

ನಾಶಗೈಸೊ ಶ್ರೀನಿವಾಸ

ದಾಸ ಜನರಿಗುಲ್ಲಾಸವ ಕೊಡುತಿಹ

ವಾಸುದೇವವಿಠಲಯ್ಯನೆ ಎನ್ನೊಳು 3

***

 

No comments:

Post a Comment