ರಾಗ - : ತಾಳ -
ಧನ್ಯನಾದೆನು ನಾಂ ll ಪ ll
ಘನ್ನಮಹಿಮ ಶ್ರೀನಿವಾಸ ಕರುಣದಿಂದ ಒಲಿದನಿನ್ನು ll ಅ ಪ ll
ದೇಶದೇಶದಿಂದ ಸಕಲ
ದಾಸಜನರು ಬಂದು ಸದಾ
ಶ್ರೀಶ ಸಲಹೆಂದು ಕೂಗುವ
ಘೋಷ ಕೇಳಿ ಕರ್ಣಗಳಿಂ ll 1 ll
ಧಾರ್ತರಾಷ್ಟ್ರ ವೈರಿ ವಿನುತ
ಪ್ರಾರ್ಥಿಸುವರಭೀಷ್ಟ ಕೊಡುತ
ತೀರ್ಥ ಪ್ರಸಾದಗಳ ಮಾರಿಸಿ
ಅರ್ಥ ಗಳಿಸುವವನ ಕಂಡು ll 2 ll
ರಥವನೇರಿ ಪದ್ಮಾವತಿ
ಪತಿಯು ಬರುವುದರಿತು ದೇವ
ಸತಿಯರೆಲ್ಲ ಮುತ್ತಿನಾ-
ರತಿಯ ಬೆಳಗುವುದು ಕಂಡು ll 3 ll
ಸಂತಸದಿ ಮಹಂತರು ಶ್ರೀ-
ಕಾಂತನ ಗುಣರಾಸಿ ಪೊಗಳಿ
ಸ್ವಾಂತನಿರ್ಮಲರಾಗಿ ಭಜಿಪ-
ರಂತರಾತ್ಮನ ಕಂಡು ll 4 ll
ಭೂಮಿಗಧಿಕ ಶೇಷಗಿರಿ
ಧಾಮಪೂರ್ಣಕಾಮ ಭಕ್ತ-
ಸ್ತೋಮವನ್ನು ಪಾಲಿಪ ಗುರು-
ರಾಮವಿಟ್ಠಲನ್ನ ಕಂಡು ll 5 ll
***
No comments:
Post a Comment