Monday 6 September 2021

ತುಂಗಾತೀರದಿ ರಾಜಿಪ ಯತಿಯ ನೀರೆ ನೋಡೋಣ ಬಾ ankita abhinava janardhana vittala

 ರಾಗ: ಮಾಂಡ್ ತಾಳ: ಆದಿ


ತುಂಗಾತೀರದಿ ರಾಜಿಪ ಯತಿಯ

ನೀರೆ ನೋಡೋಣ ಬಾ


ವೃಂದಾವನದೊಳಗಿರುವ

ವೃಂದಾರಕರನುಪೊರೆವ

ವೃಂದಗುಣಗಳಿಂಮೆರೆವ

ವೃಂದಾರಕತರುಎನಿಸಿದ ಸುಜನಕೆ 1

ಮರುತಮತಾಂಬುಧಿಚಂದ್ರ ದಿನ-

ಕರ ಅಘತಮಕೆ ರವೀಂದ್ರ

ದುರುಳಮತಾಹಿಖಗೇಂದ್ರ

ಗುರು ಕರುಣಾಕರ ಶ್ರೀರಾಘವೇಂದ್ರ 2

ರವಿಶಶಿಕುಜಬುಧಗುರುವೆ

ಕವಿರಾಹುಧ್ವಜಬಲವೆ

ಇವರ ದರುಶನಕೆ ಫಲವೆ ಅಭಿ-

ನವಜನಾರ್ದನವಿಠಲನ ದಯವೆ 3

***


No comments:

Post a Comment