Friday 6 August 2021

ಸುತ್ತಬೇಕು ಜನ್ಮವೆತ್ತಬೇಕು ಕತ್ತಲೆ ಸಂಸಾರದೊಳು ಹೊತ್ತು ಹೊರೆಯ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಸುತ್ತಬೇಕು ಜನ್ಮವೆತ್ತಬೇಕು ಪ


ಕತ್ತಲೆ ಸಂಸಾರದೊಳು ಹೊತ್ತು ಹೊರೆಯ

ಹೊತ್ತುಕೊಂಡು ತತ್ತರಗೊಳುತ್ತ ನಿತ್ಯ ಅ.ಪ


ಭರತಖಂಡದೊಳು ಪುಟ್ಟಿ

ಮರುತ ಮತವ ಪೊಂದಿಕೊಂಡು

ಗುರುಕೃಪೆಯನು ಪಡೆದು

ಹರಿ ಸರ್ವೋತ್ತಮನೆಂದರಿಯೋ ತನಕ 1


ಅರಿಷಡ್ವರ್ಗವನ್ನೆ ತ್ಯಜಿಸಿ

ದುರುಳರ ಸಂಗ ಕತ್ತರಿಸಿ

ಪರಿ ಪರಿ ಕಾರ್ಯ ಕರ್ಮದೊಳು

ಹರಿಯು ತೋರುವ ತನಕ 2


ಬಿಂಬ ವಿಜಯ ರಾಮಚಂದ್ರ -

ವಿಠಲರಾಯನು ಹೃದಯ

ಅಂಬರದೊಳಗೆ ಪೊಳೆದು

ಅಂಬವಿರಜೆಯಲಿ ಮುಳುಗೊ ತನಕ 3

***


No comments:

Post a Comment