Wednesday 3 November 2021

ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ ಸುಖಪೊಂದಲು ankita karpara narahari ENU SAADHANA MAADI KRISHNA KARAVA SERITO SUKHAPONDALU



ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ

ಸುಖಪೊಂದಲು ಪ


ಸಾನು ರಾಗದಿ ಶ್ರವಣ, ಮನನÀ ಧ್ಯಾನಗೈದಿತೋ

ಬಹು ಜನ್ಮದಿ ಅ.ಪ


ದೇವದಾರು, ಅಗರು, ಚಂದನ, ಮಾವು, ಚಂಪಕ,

ಹರಿ ತೋಷಕ

ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ

ಬಿದಿರಿನಕೊಳಲು 1


ಮುರಮಡÀನನ ಅಭಯ ಕರದವರ

ಪ್ರಸಾದವ ಕಮಲೋಧ್ಬವ

ಸ್ಮರರಿಪು ಮುಖಸುರರು ಬೇಡಲು ದೊರೆಯದೀ

ವಿಭವ ವಂಶೋದ್ಬವ 2


ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು

ಸುಧೆ ಸವಿಯಲು

ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು

ನಿಂದಿರುವಳು 3

****


No comments:

Post a Comment