Wednesday 3 November 2021

ಶರಣು ಗಣಪ ಬೇಡುವೇನು ಚರಣ ಕಮಲಗಳಿಗೆ ankita madhwesha krishna SHARANU GANAPA BEDUVENU CHARANA KAMALAGALIGE SAMPRADAYA




ಶ್ಯಮಂತಕೋಪಾಖ್ಯಾನ

 ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
 ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||

 ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||


 ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||

 ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||

 ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||

 ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||

 .ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ 
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||

 ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||

 ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||

 ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
 ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||

 ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||

 ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||

 ಚೌತಿಯ ದಿನದಂದು ಚಂದ್ರನ್ನ ನೋಡಿದರೆ
 ಇಲ್ಲದ ಅಪವಾದ ಬರುವುದೆನ್ನುತ೧೩||

 ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
 ಎಡವಿ ಬಿದ್ದುದನ್ನು ನೋಡಿ  ಚಂದ್ರ ನಕ್ಕನು೧೪||

 ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
 ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||

 ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
 ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||

 ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||

 ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
 ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||

 ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||

 ವಿಘ್ನರಾಜನ ಪೂಜೆ  ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||

 ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
 ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
***


(Sampradayaka hadu)
🌹🌹ಶ್ಯಮಂತಕೋಪಾಖ್ಯಾನ🌹🌹
 ಶರಣು ಗಣಪ ಬೇಡುವೇನು ಚರಣಕಮಲಗಳಿಗೆ ಎರಗಿ
 ವರವ ಬೇಡಿ ಪಾಲಿಸೆಂದು ಮೊರೆಯ ಹೊಗುವೆನು||೧||
 ಧರ್ಮರಾಜ ಪೂಜಿಸಿದ ನಿನ್ನ ಪಾದ ಪದ್ಮಗಳ
ಸಾಧಿಸಿದ ತನ್ನ ರಾಜ್ಯ ಸತ್ಯದಿಂದಲಿ||೨||
 ರಾವಣನು ತಾನು ಮದಮೀರಿ ನಿನ್ನ ಪುಜಿಸದೆ
ಪ್ರಾಣಹಾನಿ ಮಾಡಿಕೊಂಡ ಗಜಾನನ||೩||
 ಸತ್ರಜಿತರಾಜನು ಸೂರ್ಯನನ್ನು ಧ್ಯಾನಿಸಿ
ಶ್ಯಮಂತಕ ಮಣಿಯನ್ನು ಪಡೆದು ಇದ್ದನು||೪||
 ಲೋಕದಾ ಜನರಿಗೆ ತಿಳಿಸ ಬೇಕೆನ್ನುತ
ಪ್ರೀತಿಲಿಂದ ಶ್ರೀ ಕೃಷ್ಣ ಮಣಿಯ ಕೇಳಿದ||೫||
 ಸತ್ರಜಿತನ ಸೋದರ ಪ್ರಸನ್ನನೆಂಬುವ
ಮಣಿಯ ಅಪಹರಿಸಿ ಸಿಂಹಕ್ಕೆ ಬಲಿಯಾಗಲು||೬||
 .ಸಿಂಹದ ಬಾಯಲ್ಲಿ ಮಣಿಯನ್ನ ನೋಡುತ 
ಜಾಂಬವಂತ ಸಿಂಹನ ಕೊಂದು ಮಣಿಯ ತಂದನು||೭||
 ತಮ್ಮನ ಕಾಣದಿರಲು ಕೃಷ್ಣನೆ ಕೊಂದನೆಂದು
ರಾಜನು ಬಹಳ ಅಪವಾದ ಕಟ್ಟಿದ||೮||
 ಪ್ರಸೇನನ್ನ ಹುಡುಕುತ ಕೃಷ್ಣ ಹೋಗುತಿರಲ ಮುಂದೆ
ಸಿಂಹಕ್ಕೆಬಲಿಯಾದ ವಾರ್ತೆ ತಿಳಿಯುತ||೯||
 ಗುಹದೊಳಗೆ ಹೋಗುತಿರಲು ಜಾಂಬವಂತ ನೋಡುತ
 ಘೋರ ಯುಧ್ಧವಾಗಿ ರಾಮನನ್ನು ಕಾಣುತ||೧೦||
 ರಾಮನನ್ನು ಕಾಣಲು ಪ್ರೇಮದಿಂದ ಅಪ್ಪಿಕೊಂಡು
ಮಗಳ ಕೊಟ್ಟು ಮದುವೆಮಾಡಿ ಮಣಿಯ ಕೊಟ್ಟನು||೧೧||
 ತಪ್ಪು ತಿಳಿದ ಸತ್ರಜಿತನು ಭಕ್ತಿಯಿಂದ ಕೈಯ ಮುಗಿದು
ಕ್ಷಮಿಸಬೇಕೆನುತಲಿ ಪಾದ ಕ್ಕೆರಗಿದ||೧೨||
 ಚೌತಿಯ ದಿನದಂದು ಚಂದ್ರನ್ನ ನೋಡಿದರೆ
 ಇಲ್ಲದ ಅಪವಾದ ಬರುವುದೆನ್ನುತ೧೩||
 ಸತ್ಯಲೋಕದಿಂದ ಗಣಪ ಚಂದ್ರಲೋಕ ಸೇರುತಿರಲು
 ಎಡವಿ ಬಿದ್ದುದನ್ನು ನೋಡಿ  ಚಂದ್ರ ನಕ್ಕನು೧೪||
 ತಾನೆ ಚಲುವ ನೆಂಬ ಭ್ರಾಂತಿ ಚಂದ್ರನಿಗೆ ಇರುತಿರಲು
 ನಿನ್ನ ನೋಡಲು ಜನಕೆ ಅಪವಾದ ಬರಲಿ ಎಂದನು||೧೫||
 ದು:ಖದಿಂದ ಚಂದ್ರನು ಮರುಕದಿಂದ ಬೇಡುತಿರಲು
 ಮತ್ತೆ ತನ್ನ ಶಾಪ ಸಂಕುಚಿತ ಮಾಡಿದ||೧೬||
 ಭಾದ್ರಪದ ಶುಧ್ಧ ಚೌತಿಯ ದಿನದಂದು
ನಿನ್ನ ನೋಡಿದರೆ ಅಪವಾದ ಬರುವುದು||೧೭||
 ಅಂದು ಶ್ರೀ ಕೃಷ್ಞನು ಚೌತಿಯ ದಿನದಂದು
 ಚಂದ್ರನನ್ನ ನೋಡಿ ಅಪವಾದ ಪಡೆದನು||೧೮||
 ಶ್ಯಮಂತಕ ಮಣಿಯ ಕಥೆ ಭಕ್ತಿಯಿಂದ ಕೇಳಲು
ಬಂದ ಅಪವಾದ ಪರಿಹಾರವಾಗೋದು||೧೯||
 ವಿಘ್ನರಾಜನ ಪೂಜೆ  ಶ್ರಧ್ಧೆಯಿಂದ ಮಾಡಲು
ವಿಘ್ನ ಬಾರದಂತೆ ನಮ್ಮನ ಸದಾ ಕಾಯುವ||೨೦||
 ನೇಮದಿಂದಲೀತನ ಪೂಜೆ ಮಾಡುತ್ತಿರಲು ಮತ್ತೆ
 ಸ್ವಾಮಿ ಮಧ್ವೇಶಕೃಷ್ಣ ತಾನೆ ಸಲಹುವ||೨೧||
~~~~~~ಹರೇಶ್ರೀನಿವಾಸ
****

No comments:

Post a Comment