Thursday 5 August 2021

ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ankita kamalanabha vittala

 ..

kruti by Nidaguruki Jeevubai  - this is the first song

ಕರುಣದಿಂದ ಕಾಯೊ ಎನ್ನನು
ಉರಗಾದ್ರಿವಾಸ ವಿಠ್ಠಲ ದೇವ ಪ

ತಂದೆ ವೆಂಕಟೇಶ ವಿಠ್ಠಲ
ಬಂದು ಎನ್ನ ಹೃದಯದಲ್ಲಿ
ನಿಂದು ನಾಮ ನುಡಿಸಿ ಪೇಳ್ವ
ಚಂದ ಮನಕೆ ತಂದು ಕೊಡುತ 1

ವಾಸುದೇವ ನಿನ್ನ ಮಹಿಮೆ
ತೋಷದಿಂದ ಭಜಿಸುವುದಕೆ
ದೋಷಗುಣಗಳನ್ನೆ ಕಳೆದು-
ಲ್ಲಾಸ ಮನಕೆ ಒದಗುವಂತೆ 2

ಮಂದಮತಿಗಳಾದ ಜನಕೆ
ಮುಂದೆ ಗತಿಯ ಪಥವ ತೋರಿ
ಬಂಧನಂಗಳನ್ನೆ ತರಿದು
ತಂದೆ ಕಾಯೊ ಇಂದಿರೇಶ 3

ಬೊಕ್ಕಸದ ದ್ರವ್ಯ ಜನರು
ವೆಚ್ಚಮಾಡುತಿರುಹ ತೆರದಿ
ಮೆಚ್ಚಿ ಬಂದ ಜನರ ಮನದ
ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4
ಅಂತರಂಗದೊಳಗೆ ನಿನ್ನ
ಚಿಂತೆ ಮರೆಯದಂತೆ ಕೊಟ್ಟು
ಅಂತರಾತ್ಮ ಕಮಲನಾಭ
ವಿಠ್ಠಲ ಸಂತೈಸಿ ಕಾಯೊ5
***

ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.

ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ:
***

No comments:

Post a Comment