Thursday 5 August 2021

ಇಂದು ನೋಡಿದೆ ನಾನು ಸಾಧು ಸಂತರ ಇಂದು ಕೂಡಿದೆ ankita jnanabodha

 ..

ಇಂದು ನೋಡಿದೆ ನಾನು ಸಾಧು ಸಂತರ ಇಂದು ಕೂಡಿದೆ ಎನ್ನ ಮನದ ಪ್ರೀಯರ ಪ


ಚರಣ ಕಮಲವು ಕಾಣುತಾಕ್ಷಣಹರುಷವಾಯ್ತು ಪೂರ್ಣ ಎನ್ನ ಮನಸಿಗೆ |ಶರಧಿ ಎಬ್ಬಿದ ಪರಿಯ ಎನ್ನೊಳುಪರಮ ಚಿದ್ಘನಾನಂದ ತುಳುಕಿತು 1

ಪೇಳಲೆ ಎನ್ನಯ ಅಮಿತ ಸುಖವನುಭಾಲಲೋಚನನೆ ಬಲ್ಲ ಇದರ ಬಗೆಯನು |ಕೀಳ ಜನರಿದನೇನು ಬಲ್ಲರುಹಾಳ ಬದುಕುವದಿಂದೇತರದಿವರ ಜನ್ಮವು 2

ಸಕಲ ಸಾಧುರ ಪಾದ ಧೂಳಿಯಭಕ್ತಿಯಿಂದಲಿ ನಾನು ಬಿಡದೆ ಧರಿಸುವೆ |ಮುಕ್ತಿ ನಾಲ್ಕಕೆ ಮಿಗಿಲ ಪದವನುನಿಖಿಲ ಮೂರ್ತಿ ಜ್ಞಾನಬೋಧನೊಡೆಯನೀವನು 3

***


No comments:

Post a Comment