Sunday 5 December 2021

ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ ಗೋಕುಲಪತಿ ಗೋವಿಂದಯ್ಯ purandara vittala NEE KODE NAA BIDE KELAYYA RANGA GOKULAPATI GOVINDAYYA



ಪುರಂದರದಾಸರು

ನೀ ಕೊಡೆ ನಾ ಬಿಡೆ ಕೇಳಯ್ಯ ರಂಗ
ಗೋಕುಲಪತಿ ಗೋವಿಂದಯ್ಯ ||ಪ||

ನೋಡುವೆ ನಿನ್ನನು ಪಾಡುವೆ ಗುಣಗಳ
ಬೇಡುವೆ ಕಾಡುವೆ ನಾಡೊಳಗೆ
ಮೋಡಿಯ ಬಿಡು ಬಿಡು ಮೊದಲಿಗ ಬಡ್ಡಿಯ
ಕಾಡಲಿ ತುರುಗಳ ಕಾಯ್ದ ರನ್ನ ||

ಎಂಟಕ್ಷರವಿದೆ ಹೃದಯಸಾಕ್ಷಿಗಳಿವೆ
ಗಂಟೆಗೆ ಮೋಸವೆ ದಾಸನಿಗೆ
ಎಂಟೆಟೆನಿಸುವ ಬಂಟನ ಕೈಯಲಿ
ತುಂಟತನವ ಬಿಡೊ ತುಡುಗರಸೊ ||

ಅಪ್ಪ ಶ್ರೀ ಕೃಷ್ಣನೆ ಅಮರರಿಗೊಲಿದನೆ
ಸರ್ಪನ ಮೇಲೊರಗಿಪ್ಪವನೆ
ಒಪ್ಪಿಸಿ ಕೊಟ್ಟರೆ ಪುರಂದರವಿಠಲನ
ಒಪ್ಪುತ ಪಾಡುವೆ ನಡೆ ಮನೆಗೆ ||
***

ಈಗಲೆ ಕೊಡೆನಗೆ ಮುಕ್ತಿಯನು
ನಾಗಶಯನ ಶ್ರೀಪುರಂದರವಿಠಲನೆ
***


pallavi

nI koDe nA biDe kELayya ranga gOkulapati gOvindayya

caraNam 1

nODuve ninnanu pADuve guNagaLa bEDuve kADuve nADoLage
mODiya biDu biDu modaliga baDDiya kADali durugaLa kAidaranna

caraNam 2

eNtakSaravide hrdaya sAkSigaLive gaNDage mOsave dAsanige
eNTeTenisuva baNDana kaiyali tuNTatanava biDo tuDugaraso

caraNam 3

appa shrI krSNane amararigolidane sarpana mEloragippavane
oppisi koTTare purandara viTTalana opputa pADuve naDe manege
***

ನೀ ಕೊಡೆ ನಾ ಬಿಡೆ ಕೇಳಯ್ಯ-ಹರಿ-|
ಗೋಕುಲಪತಿಗೋವಿಂದಯ್ಯ ಪ

ನೋಡುವೆ ನಿನ್ನನು ಪಾಡುವೆ ಗುಣಗಳ |ಕಾಡುವೆ ಬೇಡುವೆ ನಾಡೊಳಗೆ ||ಮೋಡಿಯ ಬಿಡು ಕೊಡು ಮೊದಲಿಗೆ ಬಡ್ಡಿಯ |ಕಾಡೊಳು ತುರುಗಳ ಕಾಯ್ದರಸನೆಹರಿ1

ಎಂಟಕ್ಷರವಿವೆ ದ್ವಯಸಾಕ್ಷಿಗಳಿವೆ |ಗಂಟಿಗೆ ಮೋಸವೆ ದಾಸರಿಗೆ ||ಎಂಟುಂಟೆನಿಸುವೆ ಬಂಟರ ಬಾಯಲಿ |ತುಂಟತನವ ಬಿಡು ತುಡುಗರರಸೆ 2

ಅಪ್ಪನೆ ಅಯ್ಯನೆ ಅಮರರಿಗೊಲಿದನೆ |ಸರ್ಪನೆ ಮೇಲೆ ಮಲಗಿಪ್ಪವನೆ |ಒಪ್ಪಿಸಿಕೊಟ್ಟರೆಪುರಂದರವಿಠಲನೆ |ಒಪ್ಪವ ತೋರುವೆ ಒಡೆಯನಿಗೆ 3
*******

No comments:

Post a Comment