Monday 6 December 2021

ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ purandara vittala YAAKE KADEGANNINDA NODUVE KRISHNA NEE



ರಾಗ ರೇಗುಪ್ತಿ ಅಟತಾಳ

ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ
ನೀ ಕರುಣಾಕರನಲ್ಲವೆ ||ಪ||

ಭಕ್ತವತ್ಸಲ ನೀನಲ್ಲವೆ, ಕೃಷ್ಣ
ಚಿತ್ಸುಖದಾತ ನೀನಲ್ಲವೆ
ಅತ್ಯಂತ ಅಪರಾಧಿ ನಾನಾದಡೇನಯ್ಯ
ಇತ್ತಿತ್ತ ಬಾರೆನ್ನಬಾರದೆ ರಂಗ ||

ಇಂದಿರೆಯರಸ ನೀನಲ್ಲವೆ, ಬಹು
ಸೌಂದರ್ಯ ನಿಧಿ ನೀನಲ್ಲವೆ
ಮಂದಮತಿ ನಾನಾದರೇನು ಕೃಪಾ-
ಸಿಂಧು ನೀ ರಕ್ಷಿಸಬಾರದೆ ರಂಗ ||

ದೋಷಿಯು ನಾನಾದಡೇನಯ್ಯ, ಸರ್ವ-
ದೋಷರಹಿತ ನೀನಲ್ಲವೆ
ಘಾಸಿ ಯಾತಕೆ ನಿನ್ನ ನಂಬಿದೆ ಸಲಹಯ್ಯ
ಶೇಷಶಾಯಿ ಶ್ರೀಪುರಂದರವಿಠಲ ||
***

pallavi

yAke kaDekaNNinda nODuve krSNa nI karuNAkaranallave

caraNam 1

bhaktavatsala nInallave krSNa citsukhadAta nInallave
atyanta aparAdhi nAnAdaDEnayya ittitta bArenna bArade ranga

caraNam 2

indireyarasa nInallave bahu saundarya nidhi nInallave
mandamati nAnAdarEnu krpAsindhu nI rakSasa bArade ranga

caraNam 3

dOSiyu nAnAdELEnayya sarva dOSa rahita nInallave
gAsi yAtake ninna nambide salahayya shESashAyi shrI purandara viTTala
***

ಯಾಕೆ ಕಡೆಗಣ್ಣಿಂದ ನೋಡುವೆ ಕೃಷ್ಣನೀ ಕರುಣಾಕರನಲ್ಲವೆ? ಪ

ಭಕ್ತವತ್ಸಲ ನೀನಲ್ಲವೆ-ಕೃಷ್ಣ ಚಿತ್ತಸುಖದಾತ ನೀನಲ್ಲವೆ?
ಅತ್ಯಂತ ಅಪರಾಧಿ ನಾನಾದಡೇನಯ್ಯಇತ್ತಿತ್ತ ಬಾ ಎನ್ನಬಾರದೆ ರಂಗ 1

ಇಂದಿರೆಯರಸ ನೀನಲ್ಲವೆ ಬಹು ಸೌಂದರ್ಯನಿಧಿ ನೀನಲ್ಲವೆ?
ಮಂದಮತಿ ನಾನಾದಡೇನು ಕೃಪಾಸಿಂಧುನೀ ರಕ್ಷಿಸಬಾರದೆ ರಂಗ2

ದೋಷಿಯು ನಾನಾದಡೇನಯ್ಯ-ಸರ್ವ ದೋಷರಹಿತ ನೀನಲ್ಲವೆ?
ಗಾಸಿಯೇತಕೆ ನಿನ್ನ ನಂಬಿದೆ ಸಲಹಯ್ಯಶೇಷಶಾಯಿ ಶ್ರೀಪುರಂದರವಿಠಲ3
*******

No comments:

Post a Comment