Friday 27 December 2019

ಪಾಲಿಸೋ ಜಗದೀಶ ಅನುದಿನಂ others

ರಾಗ ಶ್ರೀರಾಗ ಆದಿತಾಳ

ಪಾಲಿಸೋ ಜಗದೀಶ ಅನುದಿನಂ
ಪಾಲಿಸೋ ಜಗದೀಶ ||ಪ||

ಮಂದಬುದ್ಧಿಯಲಿ ಸುದತೀಜನರ ಸೇರಿ
ಕಂದಿದೆನೋ ದೇವಾ ಕಾಯೊ ಮುರಾರಿ
ಇಂದು ಕೈಯ ಬಿಡುವುದು ಉಚಿತವೆ ಶೌರಿ , ನೀ
ತಂದೆ ಗತಿಯು ಎನಗಾರು ವಿಹಾರಿ ||೧||

ಭಕ್ತರ ಪೊರೆಯುವಂಥ ಬಿರುದೆಲೋ ನಿನಗೆ
ಭಕ್ತನೆಲೋ ನಾನು ನಿನ್ನ ಪದಗಳಿಗೆ
ಯುಕ್ತರ ಸಂಗಗಳಿಗೆ ಸೇರಿಸೋ ಎನಗೆ
ತಿಕ್ತವೇನೋ ನಾನು ನಿನ್ನ ನಾಲಿಗೆಗೆ ||೨||

ವೈಕುಂಠಪುರದೊಡೆಯ ಎನ್ನ ಕಾಯುವುದು
ಲೋಕಪಾಲಕನಿಗೆ ಕಷ್ಟವೇನಿಹುದು
ನೂಕಿಬಿಟ್ಟರೆ ಎನ್ನ ನೀತಿಯಾಗುವುದೇ
ಸಾಕಬೇಕು ನೀ ಸುಮನೆ ಇರದೆ ||೩||
*****

No comments:

Post a Comment