Friday 27 December 2019

ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ others

ಭೈರವಿ ರಾಗ ಆದಿತಾಳ

ಕೃಷ್ಣ ಪಾಲಿಸೋ ಶ್ರೀ ಶಾರ್ಙ್ಗಪಾಣಿ ||ಪ||

ಮಾತೆ ಉದರದೊಳತಿ ತಾಪದೊಳಿರ್ದೆ
ರೀತಿಯ ಮರೆತು ನಾನಳುತ ಬಿದ್ದಿರ್ದೆ
ಕಾತುರದಲಿ ಕುಣಿದಾಡಿ ನಗುತಿರ್ದೆ
ಈ ತೆರನಾಗಿ ನಾ ಬಾಲನಾಗಿದ್ದೆ ||೧||

ಮುಂಜಿ ಮದುವೆಯಾಗಿ ಸಂಭ್ರಮದಿಂದ
ಅಂಜಿಕೆಯು ಇಲ್ಲದೆ ತಿರುಗುತ್ತ ಮುದದಿ
ಸಂಜೆ ವೇಳೆಯಲಿ ಸೂಳೆಯರ ಗೃಹದಿ
ರಂಜಿಪ ಲೀಲೆಯೊಳು ಕಾಲವ ಕಳೆದೆನು ||೨||

ಚಿಂತೆ ಪಡುತ ನಾ ಚಿರಕಾಲವಿದ್ದೆ
ಶ್ರಾಂತಿಯಿಲ್ಲದೆ ಸುತ್ತಿ ಸಾಯುತಲಿದ್ದೆ
ಶಾಂತನಾದೆ ವೈಕುಂಠ ನಗರೀಶ
ಭ್ರಾಂತಿಯ ಬಿಟ್ಟೆನೈ ಕಾಯೋ ಜಗದೀಶ ||೩||
********

No comments:

Post a Comment