Thursday 26 December 2019

ಮಧ್ವಮುನಿಯೇ ಎನ್ನ ಹೃತ್ಕುಮುದ ankita vijaya vittala MADHWAMUNIYE ENNA HRUTKUMUDA MADHWACHARYA STUTIH

 ರಾಗ ಶಿವರಂಜಿನಿ   ಖಂಡಛಾಪುತಾಳ 

Audio by Mrs. Nandini Sripad

ಶ್ರೀ ವಿಜಯದಾಸರ ಕೃತಿ 

ಮಧ್ವಮುನಿ ಎನ್ನ ಹೃತ್ಕುಮುದ ಚಂದ್ರ ॥ ಪ ॥
ಅದ್ವೈತ ಮತಾರಣ್ಯ ದಹನ ಗುಣಸಾಂದ್ರ ॥ ಅ ಪ ॥

ನೊಂದೆ ಎಂಭತ್ತುನಾಲ್ಕು ಲಕ್ಷ ಯೋನಿಯಲ್ಲಿ ।
ಒಂದೇ ಪ್ರಕಾರ ಸಂಚರಣೆಯಿಂದ ॥
ಒಂದೊಂದು ಕರ್ಮವಾ ಅರಸಿ ನೋಡಿದೆ ಅದ - ।
ರಿಂದ ಭವಾಬ್ಧಿಗೆ ವಂದುಪಾಯವ ಕಾಣೆ ॥ 1 ॥

ನೀರು ಚಳಮಳ ಕಾಸಿ ಆರಲಿಟ್ಟು ಹೆಪ್ಪಾ ।
ನೀರಿನಿಂದಲಿ ಕೊಡಲು ಬಪ್ಪುದೇನೂ ॥
ಮಾರುತೀ ನಿನ್ನ ಕೃಪೆ ಪಡಿಯದಲೆ ಉಳಿದವರ ।
ಕಾರುಣ್ಯವಾದರೂ ಮೋಕ್ಷ ಸಾಧನವಲ್ಲ ॥ 2 ॥

ಹರಿಸಿರಿಗೆ ಎರಗುವಾ ಸತ್ವ ಶರೀರನೆ ।
ನಿರುತ ಎನ್ನೊಳಗಿಪ್ಪ ಮುಖ್ಯ ಗುರುವೆ ॥
ನೆರೆನಂಬಿದೆನೊ ಸ್ವಾಮಿ ವಿಜಯವಿಠ್ಠಲನ್ನ ।
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ॥ 3 ॥
***

Madhvamuniye enna hrutkumuda chandra ||pa||

Advaitamataranya dahana gunasandra ||a.pa||

Nonde embatnalku lakshayonigalalli
Onde prakara sancagneyinda
Ondondu karmagalanarasi nodalu ada-
Rinda bavabdhige bamdupayava kane ||1||

Niru calapalakasi aralittu heppu
Nirinindali kodalu bappudeno
Maruti ninna krupe padeyadale ulidavara
Karunyavagalu mokshasadhanavilla||2||

Harisirige eraguva satva sarirane
Niruta ennolagippa mulaguruve
Nere nambideno svami vijayaviththalareyana
Caranadalliruvamte sadhyavagali manasu ||3||
***


ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ||pa||

ಅದ್ವೈತಮತಾರಣ್ಯ ದಹನ ಗುಣಸಾಂದ್ರ ||a.pa||

ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ
ಒಂದೇ ಪ್ರಕಾರ ಸಂಚgಣೆಯಿಂದ
ಒಂದೊಂದು ಕರ್ಮಗಳನರಸಿ ನೋಡಲು ಅದ-
ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1||

ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು
ನೀರಿನಿಂದಲಿ ಕೊಡಲು ಬಪ್ಪುದೇನೊ
ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ
ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2||

ಹರಿಸಿರಿಗೆ ಎರಗುವ ಸತ್ವ ಶರೀರನೆ
ನಿರುತ ಎನ್ನೊಳಗಿಪ್ಪ ಮೂಲಗುರುವೆ
ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||
********

 


*********

No comments:

Post a Comment