Friday 27 December 2019

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ankita vasudeva vittala

by ವ್ಯಾಸತತ್ವಜ್ಞರು

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ||

ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ||

ಹುಡುಗರು ಮಾಡುವ ತಪ್ಪಿಗೆ ಜನನಿ ತಾ
ಬಿಡುವಳೆ ಅದರಿಂದ ದಯವ ಮಾಡದಲೆ
ನಡೆವ ಕುದರಿ ತಾನು ಮಲಗಿದಡೆ ಇನ್ನು
ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ ||೧||

ಮಾಡುಯೆಂದದರನು ಬಿಟ್ಟರೆ ಅಪರಾಧ
ಬ್ಯಾಡವೆಂದರಾನು ಮಾಡುವುದಪರಾಧ
ಈಡಿಲ್ಲ ನಿನ್ನ ದಯೆಯೆಂತೆಂದು ನಾನಿಂದು
ಮಾಡುವೆ ಬಿನ್ನಪ ನಾಚಿಕಿಲ್ಲದಲೆ ||೨||

ಬೇಡಿಕೊಂಬೆನೊ ವಾಸುದೇವವಿಠಲ ನೀನು
ನೋಡದಿದ್ದರೆ ಭಕ್ತ ಜನರು ತಮ್ಮ
ಬೀಡು ಸೇರಲೀಸರೊ ಕೇಡೇನೋ ಇದಕಿಂತ
ನೋಡು ನೀ ಇದರಿಂದ ಕೃಪಣ ವತ್ಸಲ ಕೃಷ್ಣ ||೩||
*******


No comments:

Post a Comment