Friday 17 December 2021

ಮನವೆ ಮರೆವರೇನೊ ಹರಿಯಾ ಬಹು ಜನುಮಗಳಲಿ ankita jagannatha vittala MANAVE MAREVARENO HARIYA BAHU JANUAGALALI



by ಜಗನ್ನಾಥದಾಸರು

ಮನವೆ ಮರೆವರೇನೊ ಹರಿಯ ಬಹು ||ಪ||

ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ||

ವಿಷಯ ಚಿಂತನೆ ಮಾಡೆ ಸಲ್ಲ ಮೇಷ
ವೃಷಣನಾದನು ಪೌಲೋಮಿಯ ನಲ್ಲ
ಝಷಕೇತುವಿನ ಮೇಳಹೊಲ್ಲ ನಿ-
ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧||

ಧನವೆ ಜೀವನವೆಂಬೆ ನೀನು, ಸುಯೋ-
ಧನನ ನೋಡು, ಧನದಿಂದ ಏನಾದ ಕೊನೆಗೆ
ಅನಿರುದ್ಧದೇವನ ಮನೆಗೆ ಪೋಪ
ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨||

ಹರಿದಾಸನಾಗಿ ನೀ ಬಾಳೋ , ಗುರು-
ಹಿರಿಯರ ಪಾದಕಮಲಕೆ ನೀ ಬೀಳೊ
ನರರ ನಿಂದಾಸ್ತುತಿ ತಾಳೋ, ದೇಹ
ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩||

ಜಿತನಾಗಿ ಪೇಳುವೆ ಸೊಲ್ಲ, ಹರಿ-
ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ
ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ-
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ ||

ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಪುದಲ್ಲದೆ ನಿರ್ಮಲ ಜ್ಞಾನ
ಫಲಿಸದೆಂದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ ||೫||

ಜ್ಞಾನೇಚ್ಛಾಕ್ರಿಯಾಶಕ್ತಿ ತ್ರಯವ ತಿಳಿ-
ದಾನಂದಪಡು, ಬಯಸದಿರು ಉಭಯವ
ಸಾನುರಾಗದಿ ಬೇಡು ದಯವ ನೀ ಮ-
ದ್ದಾನೆಯಂದದಿ ಸಂಚರಿಸು ಬಿಟ್ಟು ಭಯವ ||೬||

ಭಾವಕ್ರಿಯೆ ದ್ರವ್ಯಾದ್ವೈತ ನೀ-
ನಾವಾಗ ಚಿಂತಿಸೊ , ಭೌಮಾದಿಭೂತ
ಜೀವಗಳು ಜಗನ್ನಾಥವಿಠಲ-
ಗಾವಾಸಯೋಗ್ಯವೆಂದರಿಯೊ ಸಂತತ ||೭||

***

pallavi

manavE marevarEnO hariyE bahu

anupallavi

janumagaLali paTTa bhavanegaLariya

caraNam 1

viSaya cintane mADE salla mEsha vraSaNa nAdanu paulOmiya nalla
jhasakEtuvina mELa holla nI ratananAgO yamarAya endendu kolla

caraNam 2

dhanava jIvanavembE nInu suyOdhana nODu dhanadinda EnAda konege
aniruddha dEvana manega pOpa ghana vijnAna sampAdisO konege

caraNam 3

haridAsanAni nI bALO guruhiriyara pAda kamalake nI bILO
narara nindAstuti tALO dEha sthiravalla samsAra baluhEya kELO

caraNam 4

jitavAgi pELuva solla harikatheyelli niratanASgiru lOha kalla
pratime pUjisalallE nillA parIkSitanemba rAya I mahimeya balla

caraNam 5

halavu tIrthagaLalli snAna mADE mala pOpudalladE nirmala jnAna
phalisadendendigu hIna buddhi kaLedu sEvisu sAdhugaLanu dina

caraNam 6

jnAnEccA kriyA shakti trayava tiLidAnandavaru bhayasadiru ubhayava
sAnurAgavi bEDu dayava nI maddAneyendadi sancarisu biTTu bhayava

caraNam 7

bhAvakriye dravyAdvaita nInAvAga cintisO bhaumAdi bhUta
jIvegaLu jagannAtha viThala gAvAsa yOgyavendariyO santata
***


ರಾಗ ಯರಕಲ ಕಾಂಬೋಧಿ (ಕಾಫಿ) 
ಅಟತಾಳ(ತೀನ್ ತಾಲ್) (raga, taala may differ in audio)

ಮನವೇ ಮರೆವರೇನೊ ಹರಿಯಾ ಪ

ಬಹು ಜನುಮಗಳಲ್ಲಿ ಬಟ್ಟ ಬವಣಿಗಳರಿಯಾ ಅ.ಪ.

ವಿಷಯ ಚಿಂತನೆ ಮಾಡಸಲ್ಲ ಮೇಷ
ವೃಷನನಾದನು ಹಿಂದೆ ಪೌಲೋಮಿ ನಲ್ಲ
ಝಷ ಕೇತುವಿನ ಮ್ಯಾಳ ಹೊಲ್ಲ ನಿರಾ
ಶಿಷನಾಗು ಯಮರಾಯನೆಂದೆಂದೂ ಕೊಲ್ಲ 1

ಧನವೆ ಜೀವನವೆಂಬಿ ನಿನಗೆ ಸುಯೋ
ಧನ ನೋಡು ಧನದಿಂದ ಏನಾದ ಕೊನೆಗೆ
ಅನಿರುದ್ಧ ದೇವನ ಮನೆಗೆ ಪೋಪ
ಘನ ವಿe್ಞÁನವನೆ ಸಂಪಾದಿಸು ಕೊನೆಗೆ 2

ಹರಿದಾಸನಾಗಿ ಬಾಳೋ ಗುರು
ಹಿರಿಯರ ಪಾದಕಮಲಕೆ ನೀ ಬೀಳೋ
ನರರ ನಿಂದಾಸ್ತುತಿ ತಾಳೋ ದೇಹ
ಸ್ಥಿರವಲ್ಲ ಸಂಸಾರ ಬಹು ಹೇಯ ಕೇಳೋ 3

ಹಲವು ತೀರ್ಥಗಳಲ್ಲಿ ಸ್ನಾನ ಮಾಡೆ
ಮಲ ಪೋಯಿತಲ್ಲದೆ ನಿರ್ಮಲ e್ಞÁನ
ಫಲಿಸದೆಂದಿಗು ಹೀನ ಬುದ್ಧಿ
ಕಳೆದು ಸೇವಿಸು ಸಾಧುಗಳನನುದಿನ 4

ಜಿತವಾಗಿ ಪೇಳುವೆ ಸೊಲ್ಲಾ ಹರಿ
ಕಥೆಯಲ್ಲಿ ನಿರತನಾಗಿರು ಲೋಹ ಕಲ್ಲಾ
ಪ್ರತಿಮೆ ಪೂಜಿಸಿದರೇ ನಿಲ್ಲ ಪರೀ
ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲಾ 5

e್ಞÁನೇಚ್ಛಾ ಕ್ರಿಯಾ ಶಕ್ತಿ ತ್ರಯವಾ ತಿಳಿ
ದಾನಂದ ಪಡು ಬಯಸದಿರುಭಯವಾ
ಸಾನುರಾಗದಿ ಬೇಡು ದಯವಾ ನೀ ಮ
ದ್ದಾನೆಯಂದದಿ ಚರಿಸು ಬಿಟ್ಟು ಭಯವಾ 6

ಭಾವ ಕ್ರಿಯಾ ದ್ರವ್ಯಾದ್ವೈತ ತ್ರಯ
ಆವಾಗ ಚಿಂತಿಸು ಭೂಮ್ಯಾದಿ ಭೂತಾ
ಜೀವಿಗಳೊಳು ಜಗನ್ನಾಥ ವಿಠಲ
ಗಾವಾಸ ಯೋಗ್ಯವೆಂದರಿಯೋ ಸಂತತಾ 7
********

No comments:

Post a Comment