Saturday 14 December 2019

ರಾಘವೇಂದ್ರ ತೀರ್ಥರು ಕರುಣಿ ankita jagannatha vittala

ಜಗನ್ನಾಥದಾಸರು
ರಾಘವೇಂದ್ರ ತೀರ್ಥರು
ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ
ದ್ಗುರುವರ ರಾಘÀವೇಂದ್ರ
ಚರಣ ಕಮಲಯುಗ ಮೊರೆಹೊಕ್ಕವರ ಮನದ
ಹರಕೆಯ ನಿರುತ ಈವೆ ನೀ ಕಾವೆ ಪ

ರಾಘವೇಂದ್ರ ಗುರುವೆ ನೀ ಗತಿ ಎಂದನು
ರಾಗದಿಂದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚ
ನ್ನಾಗಿ ಸಂತೈಸುವೆ ನೀ ಸನ್ಮೌನಿ 1

ಸುಧೀಂದ್ರ ಯತಿಕರ ಪದುಮ ಸಂಭವ ಮಧು
ವದ ಪಾದಾಂಬುಜ ಮಧುಪಾ
ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ
ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2

ಕುಧರದೇವನ ದಿವ್ಯರದನದಿ ಜನಿಸಿದ
ನದಿಯ ತೀರದಿ ಶೋಭಿಪ
ಸದಮಲ ಘನಮಂತ್ರ ಸದನನಿಲಯ ಜಿತ
ಮದನ ಶ್ರೀ ಜಗನ್ನಾಥ ವಿಠಲದೂತ 3
*********

No comments:

Post a Comment