Saturday 14 December 2019

ಮುನಿರಾಯಗೊಂದಿಸುವೆನನು ದಿನದಲಿ ankita jagannatha vittala

ಜಗನ್ನಾಥದಾಸರು
ಮುನಿರಾಯಗೊಂದಿಸುವೆನನು ದಿನದಲಿ
ಮನವಚನಕಾಯದಿಂ ಮರೆಯದಲೆ ಗುರು ಮಧ್ವ ಪ

ವಾಸುದೇವ ಅಮಾನವಪ್ರತಿಮ ವಿಷ್ಣು ಹರಿ
ದಾಸವರ ಪ್ರಥುಧಿ ತ್ರಿಜಗದ್ಗುರು ವರ
ಶ್ವಾಸಪತಿ ಚತುರಧೀ ತ್ರಿಜಗದ್ಗುರುವರೇಣ್ಯ
ಬೋಧ 1

ವಿಭುವಿಶ್ವವಿತುಪೂರ್ಣ ಬೋಧಾಲವ
ಸುಬುದ್ಧಿ ತ್ರಿಭುವನಾಲಯ ಧಿಷಣ ಭೂರಿಚೇತಾ
ಅಮಿತ ಬುದ್ಧಿ ಸುಖತೀರ್ಥ ಜಗ
ದಭಿವಂದ್ಯದಭ್ರಚೇತಸ ಮಹಾಮನ ಮಧ್ವ2

ಸೂರಿಮಸ್ತಕ ಮುಕುಟ ಸಕಳಜ್ಞ ಸರ್ವವಿತ್
ಮಾರುತಾತ್ಮಜ ಪೂರ್ಣ ಪುಷ್ಠ ಬುದ್ಧಿ
ವೃಜಿನ ನಾಶಕನಂತ
ಕವಿ ಲೋಕನಾಯಕ ಪ್ರಾಜ್ಞ 3

ಆನಂದತೀರ್ಥ ಗುರು ಬುದ್ಧಿ ಸುಖತೀರ್ಥ ಅನು
ಮಾನಯತಿ ಸಂಮೋದ ಹಂಸರಾಟ್
ಚಾರು ಕೃತಾಂತವಿತ್ ಮಹಾ
ಮಾನಸ ಪ್ರ್ರಮೋದಾರ್ಯವರ್ಯ ವಿದ್ಯಾಧಿಪತಿ4

ಭುವನ ಭೂಷಣ ವ್ಯಾಸಶಿಷ್ಯ ಅಜಸಮ ಧನ್ಯ
ಪ್ರವರ ಪ್ರಾe್ಞÁರ್ಯ ಧ್ವಸ್ತದುರಾಗಮ
ಕವಿರಾಯಾ ಸುಹೃತ್ ಅಖಿಳಜ್ಞ ದಶಧಿಷಣನೆ
ಅವಿರಳ ಜಗನ್ನಾಥ ವಿಠಲನಿಗತಿ ಪ್ರಿಯ 5
********

No comments:

Post a Comment