Friday 27 December 2019

ಅಂಜನಾ ಸುಕುಮಾರನೆ ಭವದಂಜಿಕೆ ankita gururama vittala

by ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

ಅಂಜನಾ ಸುಕುಮಾರನೆ ಭವ- ||ಪ||

ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||

ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯ ಪಿಡಿದೆತ್ತುವರಾರೈ ||೧||

ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ||೨||

ಕ್ಷೇಮದಾತನೇ ಶ್ರೀ ಗುರು
ರಾಮವಿಠಲ ಕಿಂಕರ
ಭೂಮಿಜಾಶೋಕನಾಶನ ||೩||
******

No comments:

Post a Comment