Saturday 4 December 2021

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ ankita abhinava janardhana vittala GURUVE NEE KARUNISADIRALU UDDHARISUVA





ಶ್ರೀ ಅಭಿನವ ಜನಾರ್ದನವಿಠಲರ ಕೃತಿ 

ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳೀ ಧರೆಯೊಳುಂಟೆ || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿಯೋ ನೀ
ಕರುಣಿಸೋ ಸುಧೀಂದ್ರಕರಜ ಶ್ರೀರಾಘವೇಂದ್ರ || ಅ ||

ತರುಣಿ ತರಳರು ಈ ಶರೀರಬಂಧುಗಳು
ಉಪಚರಿಸಲಾದಪರಂತೆ ॥
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯಂತೆ ಬಾಯ್ಬಿಡುತಿರಲು ನೋಳ್ಪರೆ , ಆಸ್ಮದ್ || ೧ ||

ಕ್ಷಿತಿಯೊಳು ಭಕ್ತರ ವಾಂಛಿತವಿತ್ತು ಪೊರೆದ ಕೀ -
ರುತಿ ಕೇಳಿ ಅತಿಶಯದಿ
ಪತಿತಪಾವನನೆಂದು ನುತಿಸಿ ಸಂಸ್ತುತಿಸಿ ತ್ವ -
ರಿತದಿ ಬಂದು ಶರಣಾಗತನಾದ ಮೇಲೆ || ೨ ||

ದಿನಕರ ಕುಲಜಾತನೆನಿಪ ರಾಮನ ಪಾದ
ಶರಣಾರಾಧಕರೆನೆ ನಿತ್ಯ
ಮುನಿಕುಲೋತ್ತಂಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ದನವಿಠ್ಠಲನ ದೂತ || ೩ ||
***

 ರಾಗ ಹಂಸಧ್ವನಿ       ಆದಿತಾಳ (raga tala may differ in audio)


ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳು ಧರೆಯೊಳು೦ಟೆ                                 || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ
ಕರುಣಿಸು ಸುಧೀ೦ದ್ರಕರಜ ರಾಘವೇ೦ದ್ರ              || ಅ ||

ತರುಣಿ ತರಳರೀಶರೀರಬ೦ಧುಗಳುಪ
ಚರಿಸಲಾದಪರೆಲ್ಲ
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯ೦ತೆ ಬಾಯ್ಬಿಡುತಿರಲು ನೋಳ್ಪರೆ ಆಸ್ಮತ್        || ೧ ||

ಕ್ಷಿತಿಯೊಳು ಭಕ್ತರವಾ೦ಛೆಗಳಿತ್ತು
ಪೊರೆವವಾರುತಿ ಕೇಳಿ
ಪತಿತಪಾವನನೆ೦ದು ನತನಾಗಿ ತುತಿಸಿ ತ್ವ
ರಿತದಿ ಬ೦ದು ಶರಣಾಗತನಾದ ಮೇಲಿನ್ನು            || ೨ ||

ದಿನಕರಕುಲಜಾತನೆನಿಪ ರಾಮರ ಪಾದ
ವನಜಾರಾಧಕರೆನಿಪ
ಮುನಿಕುಲೋತ್ತ೦ಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ಧನವಿಠ್ಠಲನ ದೂತ
*******


No comments:

Post a Comment