Friday 27 December 2019

ಇಂದಿರಾನಂದುದಧಿವರ್ಧನೆಂದು ankita jayesha vittala

ಶ್ರೀ ಜಯೇಶವಿಠಲರ ಕೃತಿ 
ರಾಗ ಅಭೋಗಿ            ಆದಿತಾಳ 

ಇಂದಿರಾನಂದುದಧಿವರ್ಧನೆಂದು || ಪ ||
ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು || ಅ.ಪ ||

ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ
ನಾನಾ ಯಾತನೆ ಭಾವ ಬಲೆಯ ಕಟ್ಟಿ
ಹೀನಗೋಜಿಗೆ ಸಿಕ್ಕಿ ಬಲುನೊಂದೆ ಗೋವಿಂದ
ನೀನು ನಿನ್ನದು ಎಂಬೋ ಅಮೃತಜ್ಞಾನದಿ ನಿಲಿಸು || 1 ||

ದರ್ವಿಯಂದದಿ ನಾನು , ನೀ ಸರ್ವ ಸ್ವಾತಂತ್ರ
ನಿರ್ವಾಹ ನಿನ್ನಿಂದ ಸರ್ವ ಜಗಕೆ
ದೂರ್ವಿ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ -
ಗರೆವಂಥ ಗುಣನಿಧಿಯೆ ಸರ್ವಾತ್ಮ ಹೊರೆ ಹೊರೆಯೊ || 2 ||

ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ
ಎನ್ನಲ್ಲಿ ಎಂದೆಂದು ವೇದವೇದ್ಯ
ನಿನ್ನ ದರುಶನ ಫಲಕೆ ನಿನ್ನವರ ಮಹಕರುಣ
ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ || 3 ||

ಮನೋವಿಕಾರಗಳೆಂಬ ದುಃಖಾರ್ಣವದಲಿ ಬಿದ್ದು
ಅನುಮಾನಮುನಿದೈವ ನಿನ್ನ ಅಮೃತ
ತನುಧ್ಯಾನ ಮನಕ್ಹಿಡಿಯದೇನುಗತಿ ಯದುವರ್ಯ
ತೃಣಕೆ ಕೈವಲ್ಯವೀವ ತ್ರ್ಯಕ್ಷೇಶಮನ ಪೊಂದು || 4 ||

ಜ್ಞಾನ ಮನ ಬಿಡದಿರು ದೀನ ಬಾಂಧವ ಕೃಷ್ಣ
ಈ ನಿನ್ನ ಮಾಯವನು ತೆಗೆಯೋ ಹರಿಯೇ ॥
ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ
ಪ್ರಾಣಧಾರಕ ಶುಕನ ಆನಂದನಿಧಿ ಪಾಹಿ || 5 ||
*****

ಇಂದಿರಾನಂದ ಉದಧಿವರ್ಧನನೆಂದು ಪ

ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ

ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ
ನಾನಾ ಯಾತನೆ ಭಾವ ಬಲೆಯ ಕಟ್ಟಿ
ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ
ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1

ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ
ನಿರ್ವಾಹ ನಿನ್ನಿಂದ ಸರ್ವ ಜಗಕೆ
ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ
ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2

ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ
ಎನ್ನಲಿ ಎಂದೆಂದು ವೇದವೇದ್ಯ
ನಿನ್ನ ದರುಶನ ಫಲಕೆ ನಿನ್ನ ಮಹಕರುಣ
ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3

ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು
ಅನುಮಾನ ಮಾಡಿದೆನೊ ನಿನ್ನ ಅಮೃತ
ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ
ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4

ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ
ಇನ್ನು ಮಾಯವನು ತೆಗೆದೆನ್ನ ಬೆರೆಯೊ
ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ
ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
*****

No comments:

Post a Comment