Friday 24 December 2021

ಕಳೆದಿಹುದು ಕಾರಿರುಳು others KALEDIHUDU KAARIRULU rss

 


RSS song  


ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು

ಇಂದು ಹಿಂದು ಭಾಸ್ಕರನ ಉದಯಕಾಲ

ನಾಡ ಪರಿವರ್ತನೆಯ ಪರ್ವಕಾಲ ||ಪ||


ಉಷೆಯುದಿಸಿ ಬಂದಿಹುಳು ನಿಶೆಯುಸಿರ ನೀಗಿಹಳು

ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳ್ಯು

ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು

ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು ||೧||


ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು

ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು

ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ

ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು ||೨||


ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು?

ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು?

ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ

ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ ||೩||


ಮುರಿದಿರಲು ಸಂಧಾನ ಕರೆದಿರಲು ಸಂಗ್ರಾಮ

ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ

ರಾಮರಾಜ್ಯದ ರಚನೆ ಗೈದ ಶುಭ ಹಾರೈಕೆ

ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ ||೪||

***

kaLedihudu kAriruLu karagihudu kArmugilu

iMdu hiMdu BAskarana udayakAla

nADa parivartaneya parvakAla ||pa||


uSheyudisi baMdihuLu niSeyusira nIgihaLu

aruNa kiraNada praBege svAgatava kOrihaLyu

maimaretu malagidda nADu mEleddihudu

dAsyadavaSEShavadu dhareguruLi biddihudu ||1||


puTapuTada itihaasa saTeya dhikkarisihudu

diTada dhImaMtikeya diTTatana dharisihudu

drOhigaLu oDDiruva BIkara savAlugaLa

kaTibaddha yuvajanate Caladi svIkarisihudu ||2||


eccetta kEsarige vanadoLedurAriharu?

tuMbi morevaMbudhiya taDeva janarAriharu?

beMbalake iharemage BAratada janakOTi

munnuggi sAguvevu viGnavellava dATi ||3||


muridiralu saMdhAna karediralu saMgrAma

eddu niMtihaviMdu girinagara vana grAma

raamarAjyada racane gaida SuBa hAraike

KULa rAvaNapaDege koTTa koneyeccarike ||4||

***

ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು |

ಇಂದು ಹಿಂದು ಭಾಸ್ಕರನ ಉದಯಕಾಲ |

ನಾಡ ಪರಿವರ್ತನೆಯ ಪರ್ವಕಾಲ || || ಪ ||


ಉಷೆಯುದಿಸಿ ಬಂದಿಹಳು, ನಿಶೆಯುಸಿರ ನೀಗಿಹಳು

ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಹಳು

ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು

ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು || 1 ||


ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು

ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು

ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ

ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು || 2 ||


ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು ?

ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು ?

ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ

ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ || 3 ||


ಮುರಿದಿರಲು ಸಂಧಾನ, ಕರೆದಿರಲು ಸಂಗ್ರಾಮ

ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ

ರಾಮರಾಜ್ಯದ ರಚನೆ ಗೈವ ಶುಭ ಹಾರೈಕೆ

ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ || 4 |

***


No comments:

Post a Comment