Saturday 1 May 2021

ಕೇಶವನೆಂದರೆ ಕಷ್ಟಗಳು ಪರಿಹಾರ others ಕೇಶವ 24 ನಾಮಗಳು

 

ಕೇಶವ 24 ನಾಮಗಳು 

ಕೇಶವನೆಂದರೆ ಕಷ್ಟಗಳು ಪರಿಹಾರ 

ನಾರಾಯಣನೆಂದರೆ ನರಕದ ಭಯವಿಲ್ಲ 

ಮಾಧವನೆಂದರೆ ಮಮತೆಯಲಿ ಸಲಹುವಾ

ಗೋವಿಂದನೆಂದರೆ ಗೋಳು ಬಿಡಿಸಿ ಕಾಯುವಾ

ವಿಷ್ಣುವಿನ ನೆನೆದರೆ ವೈಕುಂಠ ತೋರುವ 

ಮಧುಸೂಧನನ ನೆನೆದರೆ ಮನೋಭೀಷ್ಠ ಸಿದ್ಧೀ

ತ್ರಿವಿಕ್ರಮನ ನೆನೆದರೆ ತೀರುವುವು ಪಾಪಗಳು

ವನನ ನೆನದರೆ ನಮ್ಮವನಾಗಿ ಕಾಯುವ

ಶ್ರೀಧರನ ನೆನೆದರೆ ಶಿರಿದೇವಿ ಒಲಿಯುವಳು

ಹೃಷಿಕೇಶನೆಂದರೆ ಹೃದಯ ಕಲ್ಮಶ ನಾಶ

ಪದುಮನಾಭನ ನೆನೆದರೆ ಪಾಲಿಸುವನೆಲ್ಲರನು 

ದಾಮೋದರನ ನೆನೆದರೆ ದಾರಿದ್ರ್ಯ ನಾಶ

ಸಂಕರ್ಷಣನ ನೆನೆದರೆ ಸಂತಾನ ವೃದ್ಧಿ

ವಾಸುದೇವನ ನೆನೆದರೆ ವರಗಳ ಕೊಡುವ 

ಪ್ರದ್ಯುಮ್ನ ನ ನೆನೆದರೆ ಸತತ ಪ್ರಕಾಶ ಭೂತಾಯಿ ಮೆಚ್ಚುವಳು 

ಅನಿರುದ್ಧನ  ನೆನೆದರೆ ಅಭಯ ಕೊಡುವ

ಪುರುಷೋತ್ತಮ ನೆಂದರೆ ಪುಣ್ಯ ಸಾಫಲ್ಯ 

ಅದೋಕ್ಷಜನ ನೆನೆದರೆ ಆದರದಿ ಕಾಯುವಾ

ನರಸಿಂಹನ ನೆನೆದರೆ ಭೀತಿ ಪರಿಹಾರ

ಅಚ್ಯುತನ ನೆನೆದರೆ ತುಚ್ಛಗಳು ನಾಶ

ಜನಾರ್ದನ ನೆಂದರೆ ಜಗವೆಲ್ಲ ವಶವು

ಉಪೇಂದ್ರನ ನೆನೆದರೆ ಆಪತ್ತು ಪರಿಹಾರ 

ಹರಿನಾಮ ನೆನೆದರೆ ಅತಿಶಯದಿ ಕಾಯುವ 

ಶ್ರೀಕೃಷ್ಣ ನ ನೆನೆದರೆ ಕೃಪೆಯಿಂದ ಸಲಹುವಾ

 ಶ್ರೀಲಕ್ಷ್ಮೀವೇಂಕಟೇಶಪ್ರಿಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು

***


No comments:

Post a Comment