Monday 6 September 2021

ಚರಣಕಮಲವನ್ನು ಭಜಿಸಿ ಶ್ರೀರಾಘವೇಂದ್ರ ಗುರುಗಳ ankita janakiramana

ರಾಗ: ಕಲ್ಯಾಣಿ ತಾಳ: ಆದಿ


ಚರಣಕಮಲವನ್ನು ಭಜಿಸಿ


ಶ್ರೀರಾಘವೇಂದ್ರ ಗುರುಗಳ ಕರುಣವನ್ನು ಗಳಿಸಿ ಅ. ಪ


ಭವಸಾಗರದಿ ಬವಣೆಗೊಂಡ ಜನರ

ಪಾವನಮಾಡುವ ಶ್ರೀವರ ಗುರುಗಳ 1

ದೀನಸೇವಕರ ಮನದಾಭೀಷ್ಟಗಳ

ಜನನಿಜನಕರಂತೆ ಆನಂದದಿಂದ ಕೊಡುವೋ 2

ಭಾನುವಂಶಜ ಶ್ರೀಜಾನಕಿರಮಣನ

ಗುಣಗಳ ಸ್ಮರಿಸುವ ಶ್ರೀ ರಾಘವೇಂದ್ರರ 3

***

 

No comments:

Post a Comment