Monday 6 September 2021

ಗುರುವಿಗೇ ಎರಗುವೇ ಪರಿಮಳ ಸುಧೆಗಿತ್ತು ಪರಿಸರಮತ ಕಾಯ್ದ ankita ananta vittala

 ರಾಗ: ದ್ವಿಜಾವಂತಿ ತಾಳ: ರೂಪಕ

ಗುರುವಿಗೇ ಎರಗುವೇ


ಪರಿಮಳ ಸುಧೆಗಿತ್ತು ಪರಿಸರಮತ ಕಾಯ್ದ ಅ ಪ 


ಹರಿಯುರು ಭಕುತಗೆ ನರಹರಿ ಪ್ರಿಯನಿಗೇ

ಕರುಣಿಗಳರಸಗೇ ಶರಣನ ಪೊರೆಯೆಂದು 1

ತುಂಗೆಯ ತೀರವ ಸಿಂಗರಿಸಿರುವಗೇ

ರಂಗನದಾಸರ ಸಂಗದಲ್ಲಿಡಿರೆಂದು 2

ಕುಂತಿಜ ಪ್ರಿಯಾನಂತವಿಠಲ ಕಿಂಕರನಿಗೇ

ಸಂತತ ಹರಿಪದ ಚಿಂತನೆ ಕೊಡಿರೆಂದು 3

***

No comments:

Post a Comment