Friday 6 August 2021

ಯಾಕೆ ಬರವಲ್ಲಿ ಭಕುತನವಸರಕೆ ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ಯಾಕೆ ಬರವಲ್ಲಿ ಭಕುತನವಸರಕೆ ಪ


ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ


ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ

ಹರಿ ನಿನ್ನ ದಾನಮಾಡೆ

ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ 1


ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು

ಪೋತ ಧ್ರುವ ಅರಣ್ಯ ಪೋಗೆ

ಪ್ರೀತಿಯಿಂದಲವನ ಕಾಯ ಪೋದ್ಯಾ 2


ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ

ಸರಸಿಜಾಕ್ಷಿಯ ಸೀರೆಯ

ದುರುಳ ಸೆಳೆಯೆ ಕಾಯ ಪೋದ್ಯಾ 3


ಹಿರಣ್ಯಾಕ್ಷನನುಜ ತರಳನ ಬಾಧಿಸೆ

ಥೋರ ಕಂಬದಿ ಒಡೆದು

ನರಮೃಗ ರೂಪನಾಗಿ ಪೋದ್ಯಾ 4


ನೀರಡಿಸಿ ಗಜರಾಜ ಸರೋವರಕೆ ಬರಲು

ಕ್ರೂರ ನಕ್ರ ಪಿಡಿದೆಳೆಯೆ

ಮೊರೆಯಿಡೆ ಕಾಯ ಪೋದ್ಯಾ 5


ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ

ಮರಣ ಕಾಲದಲ್ಲಜಮಿಳ

ನಾರಗನೆಂದು ಕರೆಯೆ ಪೋದ್ಯಾ 6


ಕರುಣಿ ವಿಜಯ ರಾಮಚಂದ್ರವಿಠಲ ಅವರ

ಸರಿ ನಾನಲ್ಲವೊ ತವ

ಚರಣ ಸೇವಕರ ಸೇವಕನೊ 7

***


No comments:

Post a Comment