Friday 6 August 2021

ರುದ್ರ ಮಹದೇವ ವೀರಭದ್ರ ಭದ್ರ ಮಾರ್ಗೋಪದೇಶಿ ಅದ್ರಿಕುವರಿ ವಲ್ಲಭ ankita vijayaramachandra vittala

 ..

Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane 


ರುದ್ರ ಮಹದೇವ ವೀರಭದ್ರ

ಭದ್ರ ಮಾರ್ಗೋಪದೇಶಿ ಅದ್ರಿಕುವರಿ ವಲ್ಲಭ ಪ


ಕ್ಷುದ್ರ ಖಳರ ಉಪದ್ರವ ಪರಿಹರಿಸಿ

ಉದ್ರೇಕ ಮಾಡು ಸುಜ್ಞಾನ ಭಕ್ತಿ ವೈರಾಗ್ಯವ

ಕದ್ರುಜಧಾರಿ ರೌದ್ರ ಮೂರುತಿಯೆ ಅ.ಪ


ಪೊಂದಿಸು ಹರಿಭಕ್ತರ ಸಂದಣಿ | ತ್ರಿಶೂಲಪಾಣಿ

ವಂದಿಪೆನು ಸುರಾಗ್ರಣಿ

ಬಂದಿಹ ವ್ಯಾಧಿಯ ಕಳೆಯೊ

ಕಂದÀರ್ಪಹರ ಕರುಣಾಕರ ಶಿವನೆ 1


ಶಿತಕಂಠ ಭಸಿತ ಭೂಷಿತ | ದಾತ ಸಂಭೂತ

ಭೂತಗಣಾಧೀಶ ವಿಖ್ಯಾತ

ವಾತನೊಡೆಯನ ಗುಣ ಸಂಪ್ರೀತಿಯಲಿ ಪೊಗಳುವಂತೆ

ಆತುರಮನ ನೀಡೊ ಯಾತರವನಲ್ಲವೊ 2


ನಿಟಿಲಾಕ್ಷಾಂಧಕಾಸುರ ಸಂಹಾರಿ | ಜಟಮಕುಟಧಾರಿ

ಸ್ಪಟಿಕ ಹಾರಾಲಂಕಾರಿ

ವಟು ವಿಜಯ ರಾಮಚಂದ್ರವಿಠಲನ ಸಂ

ಪುಟದೊಳು ನಟಿಪಂತೆ ಪಟುತರ ಮಾಡೋ 3

***


No comments:

Post a Comment